ಮುಂದಿನ ವರ್ಷ ಮಹಾರಾಷ್ಟ್ರದಲ್ಲಿ ಸರ್ಕಾರ ಬದಲಾಗಲಿದೆ: ಬಿಜೆಪಿ ಸಚಿವ

ಮುಂದಿನ ವರ್ಷ ಮಹಾರಾಷ್ಟ್ರದಲ್ಲಿ ಸರ್ಕಾರ ಬದಲಾಗಲಿದೆ ಎಂದು ಹೇಳುವ ಮೂಲಕ ಬಿಜೆಪಿ ಸಚಿವ ಗಿರೀಶ್ ಬಾಪತ್ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ಇರಿಸು ಮುರಿಸು ತರಿಸಿದ್ದಾರೆ...
ಗಿರೀಶ್ ಬಾಪತ್
ಗಿರೀಶ್ ಬಾಪತ್
Updated on
ಪುಣೆ: ಮುಂದಿನ ವರ್ಷ ಮಹಾರಾಷ್ಟ್ರದಲ್ಲಿ ಸರ್ಕಾರ ಬದಲಾಗಲಿದೆ ಎಂದು ಹೇಳುವ ಮೂಲಕ ಬಿಜೆಪಿ ಸಚಿವ ಗಿರೀಶ್ ಬಾಪತ್ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ಇರಿಸು ಮುರಿಸು ತರಿಸಿದ್ದಾರೆ.
ಮುಂದಿನ ವರ್ಷ ಸರ್ಕಾರ ಬದಲಾಗಲಿದೆ ಈ ಕಾರಣದಿಂಗಾಗಿ ಈ ಸರ್ಕಾರದಿಂದ ಯಾವುದೇ ಕೆಲಸವನ್ನು ಪಡೆಯಲು ಯೋಜಿಸಿರುವವರು ತಮ್ಮ ಬೇಡಿಕೆಗಳನ್ನು ಕಠಿಣವಾಗಿ ಅನುಸರಿಸಬೇಕು ಎಂದು ಗಿರೀಶ್ ಬಾಪತ್ ಹೇಳಿರುವ ವಿಡಿಯೋ ಇದೀಗ ವೈರಲ್ ಆಗಿದೆ. 
ಜನವರಿ 6ರಂದು ಪುಣೆಯಲ್ಲಿ ನಡೆದಿದ್ದ ದಾಳಿಂಬೆ ರೈತರ ಸಭೆಯಲ್ಲಿ ಬಾಪತ್ ಈ ಹೇಳಿಕೆ ನೀಡಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಚಿವರ ಈ ಹೇಳಿಕೆಯನ್ನು ಅಭಿನಂದಿಸಿ ಹಲವರು ಸಂದೇಶಗಳನ್ನು ಕಳುಹಿಸಿದ್ದಾರೆ. 
ದಾಳಿಂಬೆ ರೈತರ ವಿವಿಧ ಬೇಡಿಕೆಗಳ ಕುರಿತು ಇದೇ ತಿಂಗಳ ಅಂತ್ಯದಲ್ಲಿ ಚರ್ಚೆ ನಡೆಸುವುದಾಗಿ ಭಾಪತ್ ಭರವಸೆ ನೀಡಿದ್ದಾರೆ. ಇನ್ನು ಈ ಕುರಿತು ಮುಖ್ಯಮಂತ್ರಿ ಫಡ್ನವಿಸ್ ಮತ್ತು ಕೃಷಿ ಸಚಿವರೊಂದಿಗೆ ಚರ್ಚಿಸುವುದಾಗಿ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com