ಮುಂದಿನ ವರ್ಷ ಮಹಾರಾಷ್ಟ್ರದಲ್ಲಿ ಸರ್ಕಾರ ಬದಲಾಗಲಿದೆ: ಬಿಜೆಪಿ ಸಚಿವ

ಮುಂದಿನ ವರ್ಷ ಮಹಾರಾಷ್ಟ್ರದಲ್ಲಿ ಸರ್ಕಾರ ಬದಲಾಗಲಿದೆ ಎಂದು ಹೇಳುವ ಮೂಲಕ ಬಿಜೆಪಿ ಸಚಿವ ಗಿರೀಶ್ ಬಾಪತ್ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ಇರಿಸು ಮುರಿಸು ತರಿಸಿದ್ದಾರೆ...
ಗಿರೀಶ್ ಬಾಪತ್
ಗಿರೀಶ್ ಬಾಪತ್
ಪುಣೆ: ಮುಂದಿನ ವರ್ಷ ಮಹಾರಾಷ್ಟ್ರದಲ್ಲಿ ಸರ್ಕಾರ ಬದಲಾಗಲಿದೆ ಎಂದು ಹೇಳುವ ಮೂಲಕ ಬಿಜೆಪಿ ಸಚಿವ ಗಿರೀಶ್ ಬಾಪತ್ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ಇರಿಸು ಮುರಿಸು ತರಿಸಿದ್ದಾರೆ.
ಮುಂದಿನ ವರ್ಷ ಸರ್ಕಾರ ಬದಲಾಗಲಿದೆ ಈ ಕಾರಣದಿಂಗಾಗಿ ಈ ಸರ್ಕಾರದಿಂದ ಯಾವುದೇ ಕೆಲಸವನ್ನು ಪಡೆಯಲು ಯೋಜಿಸಿರುವವರು ತಮ್ಮ ಬೇಡಿಕೆಗಳನ್ನು ಕಠಿಣವಾಗಿ ಅನುಸರಿಸಬೇಕು ಎಂದು ಗಿರೀಶ್ ಬಾಪತ್ ಹೇಳಿರುವ ವಿಡಿಯೋ ಇದೀಗ ವೈರಲ್ ಆಗಿದೆ. 
ಜನವರಿ 6ರಂದು ಪುಣೆಯಲ್ಲಿ ನಡೆದಿದ್ದ ದಾಳಿಂಬೆ ರೈತರ ಸಭೆಯಲ್ಲಿ ಬಾಪತ್ ಈ ಹೇಳಿಕೆ ನೀಡಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಚಿವರ ಈ ಹೇಳಿಕೆಯನ್ನು ಅಭಿನಂದಿಸಿ ಹಲವರು ಸಂದೇಶಗಳನ್ನು ಕಳುಹಿಸಿದ್ದಾರೆ. 
ದಾಳಿಂಬೆ ರೈತರ ವಿವಿಧ ಬೇಡಿಕೆಗಳ ಕುರಿತು ಇದೇ ತಿಂಗಳ ಅಂತ್ಯದಲ್ಲಿ ಚರ್ಚೆ ನಡೆಸುವುದಾಗಿ ಭಾಪತ್ ಭರವಸೆ ನೀಡಿದ್ದಾರೆ. ಇನ್ನು ಈ ಕುರಿತು ಮುಖ್ಯಮಂತ್ರಿ ಫಡ್ನವಿಸ್ ಮತ್ತು ಕೃಷಿ ಸಚಿವರೊಂದಿಗೆ ಚರ್ಚಿಸುವುದಾಗಿ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com