ಗಣಿಗಾರಿಕೆ ಹಗರಣದ ಕುರಿತು ಕುಮಾರಸ್ವಾಮಿ ಆರೋಪ ಅರ್ಧಸತ್ಯ: ಸಚಿವ ವಿನಯ್ ಕುಲಕರ್ಣಿ

5,450 ಕೋಟಿ ರೂಪಾಯಿ ಗಣಿಗಾರಿಕೆ ಹಗರಣದ ನಡೆದಿರುವುದರ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ವಿನಯ್ ಕುಲಕರ್ಣಿ, ಕುಮಾರಸ್ವಾಮಿ ಅವರ ಆರೋಪ ಅರ್ಧ ಸತ್ಯ ಎಂದು ಹೇಳಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರು: 5,450 ಕೋಟಿ ರೂಪಾಯಿ ಗಣಿಗಾರಿಕೆ ಹಗರಣದ ನಡೆದಿರುವುದರ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ವಿನಯ್ ಕುಲಕರ್ಣಿ, ಕುಮಾರಸ್ವಾಮಿ ಅವರ ಆರೋಪ ಅರ್ಧ ಸತ್ಯ ಎಂದು ಹೇಳಿದ್ದಾರೆ. 
ಸುದ್ದಿಗಾರರೊಂದಿಗೆ ಮಾತನಾಡಿರುವ ವಿನಯ್ ಕುಲಕರ್ಣಿ, ಕುಮಾರಸ್ವಾಮಿ ಅವರ ಆರೋಪಗಳನ್ನು ತಳ್ಳಿಹಾಕಿದ್ದು, ಕುಮಾರಸ್ವಾಮಿ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಗಣಿಗಾರಿಕೆ ನಡೆಸುತ್ತಿರುವ ಪ್ರದೇಶದಲ್ಲಿ ಇಟ್ಟಿರುವ ಪುಸ್ತಕಕ್ಕೂ ಹಾಗೂ ಸಂಸ್ಥೆಯ ಲೆಕ್ಕ ಪುಸ್ತಕದಲ್ಲಿನ ಅಂಕಿ-ಅಂಶಗಳಿಗೂ ಸಣ್ಣ ವ್ಯತ್ಯಾಸವಿದೆಯಷ್ಟೇ, ಈ ಬಗ್ಗೆ ಪ್ರಾಥಮಿಕ ವರದಿಗಳನ್ನಾಧರಿಸಿ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. 
ಕುಮಾರಸ್ವಾಮಿ ಅವರು ಆರೋಪಿಸಿರುವ ಅಕ್ರಮಗಳ ಪ್ರಮಾಣದ ಬಗ್ಗೆಯೂ ಮಾತನಾಡಿರುವ ವಿನಯ್ ಕುಲಕರ್ಣಿ, ಕುಮಾರಸ್ವಾಮಿ ಅವರ ಆರೋಪದಂತೆ ಹಗರಣ ನಡೆಯಬೇಕಾದರೆ ಸುಬ್ಬರಾಯನಹಳ್ಳಿ ಮತ್ತು ತಿಮ್ಮಪ್ಪನಗುಡಿ ಪ್ರದೇಶದಲ್ಲಿ ನಡೆದಿದ್ದ ಗಣಿಗಾರಿಕೆ ಪ್ರದೇಶದಿಂದ 2000 ಟ್ರಕ್ ನಷ್ಟು ಅದಿರನ್ನು ಸಾಗಿಸಬೇಕಾಗುತ್ತದೆ. ಆದರೆ ಕಡಿಮೆಯೆಂದರೂ ಪ್ರತಿ ದಿನ 800 ಟ್ರಕ್ ಲೋಡ್ ನಷ್ಟು ಅದಿರು ಮಾತ್ರ ಗಣಿಗಾರಿಕೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com