ನರೇಂದ್ರಮೋದಿ ದೇಶದಲ್ಲಿನ ಮಾರಕ ರೋಗ ಗುಣಪಡಿಸಬಲ್ಲಾ ಉತ್ತಮ ವೈದ್ಯ :ಮೇಘ್ ವಾಲ್

ಪ್ರಧಾನಮಂತ್ರಿ ನರೇಂದ್ರಮೋದಿ ಎಂ. ಬಿ. ಬಿ.ಎಸ್ ಮಾಡದೇ ಇರಬಹುದು ಆದರೆ,ಅವರೊಬ್ಬ ದೇಶದಲ್ಲಿರುವ ಮಾರಕ ರೋಗಗಳನ್ನು ಗುಣಪಡಿಸಬಲ್ಲಾ ಉತ್ತಮ ವೈದ್ಯರು ಎಂದು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘ್ ವಾಲ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಸಾಂದರ್ಭಿಕ ಚಿತ್ರ
ಪ್ರಧಾನಿ ನರೇಂದ್ರಮೋದಿ ಸಾಂದರ್ಭಿಕ ಚಿತ್ರ

ದೆಹಲಿ: ಪ್ರಧಾನಮಂತ್ರಿ ನರೇಂದ್ರಮೋದಿ ಎಂ. ಬಿ. ಬಿ.ಎಸ್ ಮಾಡದೇ ಇರಬಹುದು ಆದರೆ,ಅವರೊಬ್ಬ ದೇಶದಲ್ಲಿರುವ ಮಾರಕ ರೋಗಗಳನ್ನು ಗುಣಪಡಿಸಬಲ್ಲಾ ಉತ್ತಮ ವೈದ್ಯರು ಎಂದು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘ್ ವಾಲ್  ಹೇಳಿದ್ದಾರೆ.

 1947 ನಂತರ ಬ್ರಿಟಿಷ್ ಆಳ್ವಿಕೆಯಿಂದ ಹಲವು ರಾಷ್ಟ್ರಗಳು ಸ್ವಾತಂತ್ರ್ಯ ಪಡೆದುಕೊಂಡಿವೆ. ಆದಾಗ್ಯೂ, ಭಾರತದ ಬೆಳವಣಿಗೆ ದರ ಹೆಚ್ಚಳಗೊಂಡಿಲ್ಲ, ಇದಕ್ಕೆ ಆರು ಪ್ರಮುಖ ರೋಗಗಳು  ಕಾರಣವಾಗಿದ್ದು, ದೇಶ  ಅಭಿವೃದ್ಧಿಯಾಗಿಲ್ಲ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲಾ ಎಂದರು.

ಮೋದಿ ಈ ಸಮಸ್ಯೆ ಬಗೆಹರಿಸಿ ಅಭಿವೃದ್ಧಿಯತ್ತ ಮುನ್ನುಗ್ಗುತ್ತಿದ್ದಾರೆ. ಮೋದಿ ಎಂಬಿಬಿಎಸ್ ವೈದ್ಯರಲ್ಲಾ, ಆದರೂ ಅವರಿಗೆ ದೇಶದಲ್ಲಿನ ಕಾಯಿಲೆಗಳ ಬಗ್ಗೆ ಅರಿವಿದ್ದು, ಸೂಕ್ತ ಚಿಕಿತ್ಸೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com