ಕಣ್ಣೂರ್: ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್ಎಸ್ಎಸ್) ಹಾಗೂ ಎಬಿವಿಪಿ ಕಾರ್ಯಕರ್ತ ಶ್ಯಾಮಪ್ರಸಾದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆರವೂರ್ ಪೊಲೀಸರು ನಾಲ್ವರು ಎಸ್ಡಿಪಿಐ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮುಹಮ್ಮದ್(20), ಸಲೀಂ(26), ಸಮೀರ್(25) ಹಶೀಂ(24) ಎಂದು ಗುರುತಿಸಲಾಗಿದೆ. ಇನ್ನು ಮುಹಮ್ಮದ್ ಸಿಪಿಎಂ ಕಕ್ಕಯಾಂಗಡು ಬ್ರಾಂಚ್ ನ ಕಾರ್ಯದರ್ಶಿ ನರೋಥ್ ದಿಲೀಪನ್ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ.
ಶುಕ್ರವಾರ ಸಂಜೆ 5.30ರ ಸುಮಾರಿ 24 ವರ್ಷದ ಶ್ಯಾಮ್ ಪ್ರಸಾದ್ ಕೊಮ್ಮಾರಿಯ ಕನ್ನಾವಾಮ್ ಬಳಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಅವರ ಮೇಲೆ ಮುಸುಕುಧಾರಿಗಳು ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಸಂಬಂಧ ಕೊಲೆಯಾದ ಎರಡು ಗಂಟೆಯಲ್ಲೇ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.