ದೆಹಲಿಯಲ್ಲಿ ಕನ್ನಡದ ಚಿತ್ರ ನಿರ್ಮಾಪಕ, ನಟ ಸೋಮಶೇಖರ್ ಬಂಧನ

ಗೃಹ ಸಚಿವಾಲಯದ ಹಿರಿಯ ಅಧಿಕಾರಿ ಎಂದು ನಂಬಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಕರ್ನಾಟಕದ ಚಿತ್ರ ನಿರ್ಮಾಪಕ, ನಟನೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಬಂಧನದ (ಸಾಂದರ್ಭಿಕ ಚಿತ್ರ)
ಆರೋಪಿ ಬಂಧನದ (ಸಾಂದರ್ಭಿಕ ಚಿತ್ರ)
Updated on

ದೆಹಲಿ:  ಗೃಹ ಸಚಿವಾಲಯದ ಹಿರಿಯ ಅಧಿಕಾರಿ ಎಂದು ನಂಬಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದ  ಕರ್ನಾಟಕದ ಚಿತ್ರ ನಿರ್ಮಾಪಕ, ನಟನೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ನಿವಾಸಿ ಕೆ. ಸೋಮಶೇಖರ್ ಬಂಧಿತ ಆರೋಪಿ. ಗೃಹ ಸಚಿವಾಲಯದ ಉಪ ಕಾರ್ಯದರ್ಶಿ ಸಲ್ಲಿಸಿದ್ದ ದೂರಿನ ಅನ್ವಯ ವಿಶೇಷ ತನಿಖೆ ನಡೆಸಿದ ದೆಹಲಿ ಪೊಲೀಸರು ,ಸೋಮಶೇಖರ್ ಸಹಿ ಇರುವ ಪತ್ರ, ಮತ್ತಿತರ ದಾಖಲೆಗಳನ್ನು  ಪರಿಶೀಲನೆ ನಡೆಸಲಾಗಿದ್ದು,ಅದು ನಕಲಿ ಎಂಬುದು ತಿಳಿದುಬಂದಿದೆ. ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಸೋಮಶೇಖರ್  ರಾಷ್ಟ್ರೀಯ ಲಾಂಛನವಿರುವ ಲೆಟರ್ ಹೆಡ್ ನಲ್ಲಿ ಪ್ರಧಾನಿ ನರೇಂದ್ರಮೋದಿಗೆ ಪತ್ರ ಬರೆದಿರುವುದು ತನಿಖೆ ವೇಳೆ  ಬೆಳಕಿಗೆ ಬಂದಿದೆ ಎಂದು ಪೊಲೀಸರು  ಹೇಳಿದ್ದಾರೆ.

ಯಲಹಂಕ ಬಳಿ ಹಲವರು ಎಕರೆ ಜಮೀನು ಹೊಂದಿರುವ ಸೋಮಶೇಖರ್, ಚಿತ್ರೋದ್ಯಮ ಪ್ರವೇಶಿಸಿ ಮೂರು ಸಿನಿಮಾನಗಳನ್ನು ನಿರ್ಮಾಣ ಮಾಡಿದ್ದಾರೆ. ಒಂದು ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿಯೂ ಅಭಿನಯಿಸಿದ್ದಾರೆ. ಆದರೆ, ಆ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ನಷ್ಟ ಅನುಭವಿಸಿದ್ದರಿಂದ ಸುಲಭವಾಗಿ ಹಣ ಗಳಿಸುವ ದೃಷ್ಟಿಯಿಂದ ವಂಚನೆ ಮಾರ್ಗ ಹಿಡಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com