ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಸುಬ್ರಹ್ಮಣಿಯನ್ ಸ್ವಾಮಿ, ಜಮ್ಮು-ಕಾಶ್ಮೀರದಲ್ಲಿ ನಾವು ಸರ್ಕಾರವನ್ನಾದರೂ ಯಾಕೆ ನಡೆಸುತ್ತಿದ್ದೇವೆ ಇನ್ನೂ ಅರ್ಥವಾಗಿಲ್ಲ ಎಂದು ಗುಡುಗಿದ್ದು, ಮೊದಲು ಎಫ್ಐಆರ್ ವಾಪಸ್ ಪಡೆಯುವಂತೆ ಸೂಚನೆ ನೀಡಿ, ಇಲ್ಲವಾದಲ್ಲಿ ಸರ್ಕಾರ ಉರುಳುತ್ತದೆ ಎಂಬ ಎಚ್ಚರಿಕೆ ರವಾನೆ ಮಾಡಿ ಎಂದು ಪಕ್ಷ ಹಾಗೂ ಕೇಂದ್ರ ಸರ್ಕಾರಕ್ಕೆ ಹೇಳಿದ್ದಾರೆ.