ರಾಜಸ್ತಾನ : ಬಿಜೆಪಿ ಶಾಸಕನ ಪುತ್ರನಿಗೆ ದಾರಿ ಬಿಡದ ಯುವಕನಿಗೆ ಥಳಿತ

ರಾಜಸ್ಥಾನದ ಬಸ್ವಾರದ ಶಾಸಕನ ಮಗನಿಗೆ ದಾರಿ ಬಿಡಲಿಲ್ಲ ಎಂಬ ಕಾರಣಕ್ಕೆ ಯುವಕನೊರ್ವನಿಗೆ ಹಿಗ್ಗಾಮುಗ್ಗಾ ರೀತಿಯಲ್ಲಿ ಥಳಿಸಲಾಗಿದೆ.
ಶಾಸಕನ ಪುತ್ರನಿಂದ ಹಲ್ಲೆಯ ಚಿತ್ರ
ಶಾಸಕನ ಪುತ್ರನಿಂದ ಹಲ್ಲೆಯ ಚಿತ್ರ
Updated on
ಬನ್ಸ್ ವಾಡ: ರಾಜಸ್ಥಾನದ ಬಸ್ವಾರದ ಶಾಸಕನ ಮಗನಿಗೆ ದಾರಿ ಬಿಡಲಿಲ್ಲ ಎಂಬ ಕಾರಣಕ್ಕೆ ಯುವಕನೊರ್ವನಿಗೆ ಹಿಗ್ಗಾಮುಗ್ಗಾ  ರೀತಿಯಲ್ಲಿ ಥಳಿಸಲಾಗಿದೆ.
ಬನ್ಸ್ ವಾರದ ವಿದ್ಯುತ್ ಕಾಲೂನಿಯಲ್ಲಿ ಜೂನ್.1 ರಂದು ಈ ಘಟನೆ ನಡೆದಿದ್ದು,  ಶಾಸಕ ದಾನ್ ಸಿಂಗ್ ರಾವತ್  ಮಗ ರಾಜಾ  ಯುವಕನೋರ್ವನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಸ್ವೀಪ್ಟ್ ಕಾರು ತನ್ನ ಕಾರನ್ನು ಓವರ್ ಟೇಕ್ ಮಾಡುತ್ತಿರುವುದನ್ನು ಗಮನಿಸಿದ ರಾಜ  ರಸ್ತೆಯನ್ನು ಬಂದ್ ಮಾಡಿಸಿದ್ದಾನೆ. ನಂತರ ಕಾರಿನಿಂದ ಚಾಲಕನನ್ನು ಎಳೆದು ಹಲ್ಲೆ ನಡೆಸಿದ್ದಾನೆ. ರಾಜನ ಸ್ಕಾರ್ಪಿಯೋ ವಾಹನದಿಂದ ಇಳಿದ ಅನೇಕ ಮಂದಿ ಕೂಡಾ  ಆ ಯುವಕನ  ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.
 ಏಕಮುಖ ರಸ್ತೆಯಲ್ಲಿ ಸಂಚರಿಸುತ್ತಿದೆ. ಆದರೆ, ಶಾಸಕನ ಪುತ್ರ ಕಾರನ್ನು ಪಕ್ಕಕ್ಕೆ ಚಲಾಯಿಸಿದೆ , ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹಲ್ಲೆಗೊಳಗಾದ ಯುವಕ ನೀರವ್ ಉಪಾಧ್ಯಾಯಿ ಹೇಳಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com