ಮೋದಿ ಸರ್ಕಾರದ ಅವಧಿಯಲ್ಲಿ ದೇಶಾದ್ಯಂತ ಅರಾಜಕತೆ ತಾಂಡವ- ಕಾಂಗ್ರೆಸ್

ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ದೇಶಾದ್ಯಂತ ಅರಾಜಕತೆ ತಾಂಡವವಾಡುತ್ತಿದ್ದು, ಜಂಗಲ್ ರಾಜ್ ನರೇಂದ್ರಮೋದಿ ಅವರ ನವ ಭಾರತದ ಹೊಸ ಚಿಹ್ನೆಯಾಗಲಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಅಭಿಷೇಕ್ ಮನು ಸಿಂಘ್ವಿ
ಅಭಿಷೇಕ್ ಮನು ಸಿಂಘ್ವಿ

ನವದೆಹಲಿ:ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ದೇಶಾದ್ಯಂತ ಅರಾಜಕತೆ ತಾಂಡವವಾಡುತ್ತಿದ್ದು,  ಜಂಗಲ್ ರಾಜ್  ನರೇಂದ್ರಮೋದಿ ಅವರ ನವ ಭಾರತದ ಹೊಸ  ಚಿಹ್ನೆಯಾಗಲಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಒಂದು ತಿಂಗಳ ಅವಧಿಯಲ್ಲಿ ದೇಶಾದ್ಯಂತ 28 ಕೊಲೆಗಳು ನಡೆದಿವೆ. ಪ್ರತಿದಿನ ಒಂದೊಂದು ಕೊಲೆಯಾಗುತ್ತಿದೆ. ಸ್ವಾತಂತ್ರ್ಯ ನಂತರದ 70 ವರ್ಷಗಳಲ್ಲಿ ಇಂತಹ  ಸ್ಥಿತಿಯನ್ನು ದೇಶ ಕಂಡಿರಲಿಲ್ಲ ಎಂದು  ಕಾಂಗ್ರೆಸ್ ವಕ್ತಾರ  ಅಭಿಷೇಕ್ ಮನು ಸಿಂಘ್ವಿ ಅಪಾದಿಸಿದ್ದಾರೆ.

ದೇಶಾದ್ಯಂತ ಕಾನೂನು ಸುವ್ಯವಸ್ಥೆ ಕುಸಿತಗೊಂಡಿದ್ದು, ಅರಾಜಕತೆ  ತಾಂಡವವಾಡುತ್ತಿದೆ. ಸಾಮಾಜಿಕ ಜಾಲ ತಾಣಗಳ ಮೂಲಕ ವದಂತಿಗಳು ಹರಡಿ ಅನೇಕ ಮುಗ್ದ ಜನರ ಕೊಲೆಯಾಗುತ್ತಿದೆ.
ಕಳೆದ ನಾಲ್ಕು ವರ್ಷಗಳ ಆಳ್ವಿಕೆಯಲ್ಲಿ  ನಮ್ಮ ಸಾಮಾಜಿಕ , ರಾಜಕೀಯ ಶಬ್ದಕೋಶದಲ್ಲಿ ಲೈಂಚಿಂಗ್ ಎಂಬ  ಹೊಸ ಶಬ್ದವನ್ನು ಸೇರಿಸಿದೆ ಎಂದು ಅಭಿಷೇಕ್ ಮನು ಸಿಂಘ್ವಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com