ನವದೆಹಲಿ: ರಾಜ್ಯಸಭೆಯ ನಿರ್ಗಮಿತ ಉಪ ಸಭಾಪತಿ ಪಿ. ಜೆ. ಕುರಿಯನ್ ಅವರಿಗೆ ಸಭಾಪತಿ ವೆಂಕಯ್ಯನಾಯ್ಡು ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬೀಳ್ಕೂಟ್ಟರು.
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ವೆಂಕಯ್ಯನಾಯ್ಡು, ಬಹು ವ್ಯಕ್ತಿತ್ವದ ಪಿ. ಜಿ. ಕುರಿಯನ್ ಉಪಸಭಾಪತಿಯಾಗಿ ಕಾರ್ಯಕಲಾಪಗಳು ಪರಿಣಾಮಕಾರಿಯಾಗಿ ನಡೆಯುವಲ್ಲಿ ಪ್ರಾಮಾಣಿಕ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಪಿ. ಜೆ. ಕುರಿಯನ್ ಮಾತನಾಡಿ, ಸದನದಲ್ಲಿ ಕಲಾಪಕ್ಕೆ ಅಡ್ಡಿ ಉಂಟುಮಾಡುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿದರು. ಸಂಸತ್ತಿನಲ್ಲಿ ಕಾರ್ಯಕಲಾಪಕ್ಕೆ ಅಡ್ಡಿಯಿಂದ ದೇಶಕ್ಕೆ ನಷ್ಟವಾಗುತ್ತದೆ. ಇಂತಹ ಪ್ರವೃತ್ತಿಗಳು ಉಂಟಾಗದಂತೆ ಆಡಳಿತಾ ಹಾಗೂ ಪ್ರತಿಪಕ್ಷಗಳು ಕೂತು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
Advertisement