ಅಳುತ್ತಿದ್ದ ಮಗುವಿನ ಬಾಯಿಗೆ ಖಾರದ ಪುಡಿ ಹಾಕಿದ ಅಂಗನವಾಡಿ ಆಯಾ!

ಅಳು ನಿಲ್ಲಿಸದ ಕಾರಣ ಕ್ರೋಧಗೊಂಡ ಅಂಗನವಾಡಿ ಆಯಾ ಮಗುವಿನ ಬಾಯಿಗೆ ಖಾರದ ಪುಡಿ ಹಾಕಿರುವ ಭಯಾನಕ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ...
ಸಂತ್ರಸ್ತ ಮಗು
ಸಂತ್ರಸ್ತ ಮಗು
ಕೃಷ್ಣ:  ಅಳು ನಿಲ್ಲಿಸದ ಕಾರಣ ಕ್ರೋಧಗೊಂಡ ಅಂಗನವಾಡಿ ಆಯಾ ಮಗುವಿನ ಬಾಯಿಗೆ ಖಾರದ ಪುಡಿ ಹಾಕಿರುವ ಭಯಾನಕ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಭೂಷಣಗುಲ್ಲಾ ಗ್ರಾಮದಲ್ಲಿ ಸೋಮವಾರ ಈ ಘಟನೆ ನಡೆದಿದೆ.
ದಿನನಿತ್ಯದಂತೆ ಸೋಮವಾರ ಕೂಡ ಮಗುವಿನ ತಾಯಿ ಅಂಗನವಾಡಿಗೆ ಮಗು ಬಿಟ್ಟು ಹೋಗಿದ್ದಾರೆ, ಈ ವೇಳೆ ಮಗು ಅಂಗನವಾಡಿಗೆ ಹೋಗಲು ನಿರಾಕರಿಸಿ ಅಳುತ್ತಿತ್ತು. ಅಳುತ್ತಿದ್ದ ಮಗವನ್ನು ಅಂಗನವಾಡಿಯಲ್ಲಿಯೇ ಬಿಟ್ಟು ತಾಯಿ ತೆರಳಿದ್ದರು.
ಮಗು ಸಮಾಧಾನವಾಗದೇ ಅಳುತ್ತಿದ್ದ ಹಿನ್ನೆಲೆಯಲ್ಲಿ  ಕೂಗಾಡಿದ ಆಯಾ, ಕುಮಾರಿ ಎಂಬಾಕೆ ಮಗುವಿನ ಬಾಯಿಗೆ ಮೆಣಸಿನಕಾಯಿ ಪುಡಿ ತುಂಬಿದ್ದಾಳೆ, ಈ ಸಂಬಂಧ ಪೋಷಕರು ಮತ್ತು ಸ್ಥಳೀಯರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com