ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಯ ಪ್ರಕಾರ ವೇದಾಂತ ಸಮೂಹ ಸಂಸ್ಥೆಗೆ ಸೇರಿದ ಒಡಿಶಾ ವಿವಿಗೆ ಶ್ರೇಷ್ಠತೆಯ ಪಟ್ಟಕ್ಕಾಗಿ ಅರ್ಜಿ ಸಲ್ಲಿಸಲು ಇದ್ದ ಗಡುವನ್ನು ಒಂದು ತಿಂಗಳವರೆಗೆ ವಿಸ್ತರಿಸಿತ್ತು. ಬೇರೆ ವಿವಿಗಳೊಂದಿಗೆ ವೇದಾಂತ ಸಮೂಹದ ವಿವಿಯ ಪರಿಗಣನೆಯಲ್ಲಿದೆ. ಆದರೆ ಅರ್ಜಿ ಸಲ್ಲಿಸಲು ನೀಡಲಾಗಿದ್ದ ಗಡುವನ್ನು ವಿಸ್ತರಿಸಲಾಗಿರುವುದರ ಬಗ್ಗೆ ಚರ್ಚೆಯಾಗುತ್ತಿದ್ದು ಹೆಚ್ ಆರ್ ಡಿ ಇಲಾಖೆ ಕಾರ್ಯದರ್ಶಿ ಆರ್ ಸುಬ್ರಹ್ಮಣ್ಯಂ, ವೇದಾಂತ ವಿವಿಯ ಮನವಿಯ ಮೇರೆಗೆ ಗಡುವು ವಿಸ್ತರಣೆ ಮಾಡಲಾಗಿತ್ತು ಎಂದು ಹೇಳಿದ್ದಾರೆ.