ಕಾಂಗ್ರೆಸ್ ಗೆ ಭಾರೀ ಹಿನ್ನಡೆ: ಶಂಕರ್ ಸಿಂಗ್ ವಘೇಲಾ ಪುತ್ರ ಬಿಜೆಪಿ ಸೇರ್ಪಡೆ

ಗುಜರಾತ್ ಕಾಂಗ್ರೆಸ್ ಗೆ ಬಾರೀ ಹಿನ್ನಡೆಯಾಗಿದೆ, ಕಾಂಗ್ರೆಸ್ ಮಾಜಿ ಶಾಸಕ ಶಂಕರ್ ಸಿಂಗ್ ವಘೇಲಾ ಅವರ ಪುತ್ರ ಮಹೇಂದ್ರಸಿಂಗ್ ವಘೇಲಾ ಕಾಂಗ್ರೆಸ್ ..
ಮಹೇಂದ್ರ ಸಿಂಗ್ ವಘೇಲಾ
ಮಹೇಂದ್ರ ಸಿಂಗ್ ವಘೇಲಾ
ಅಹಮದಾಬಾದ್: ಗುಜರಾತ್ ಕಾಂಗ್ರೆಸ್ ಗೆ ಬಾರೀ ಹಿನ್ನಡೆಯಾಗಿದೆ, ಕಾಂಗ್ರೆಸ್ ಮಾಜಿ ಶಾಸಕ ಶಂಕರ್ ಸಿಂಗ್ ವಘೇಲಾ  ಅವರ ಪುತ್ರ ಮಹೇಂದ್ರಸಿಂಗ್ ವಘೇಲಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ.
2012 ರಲ್ಲಿ ಉತ್ತರ ಗುಜರಾತ್ ನ ಬಯಾದ್ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದಾರೆ.ಮತ್ತೆ  2017 ರ ಚುನಾವಣೆಯಲ್ಲಿ ಸ್ಪರ್ದಿಸಲು ನಿರಾಕರಿಸಿದ್ದರು.
ಗುಜರಾತ್ ಬಿಜೆಪಿ ಮುಖ್ಯಸ್ಥ ಜಿತುಬಾಯಿ ವಘಾನಿ  ಈ ವಿಷಯ ಪ್ರಕಟಿಸಿದ್ದಾರೆ,ಕಳೆದ 15 ದಿನಗಳ ಹಿಂದೆ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಶಾಸಕ ಕುನ್ವರ್ಜಿ ಭವಾಲಿಯಾ ಕಾಂಗ್ರೆಸ್ ಗೆ ರಾಜಿನಾಮೆ ನೀಡಿದ್ದರು.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಭವಾಲಿಯರನ್ನು  ಕೂಡಲೇ ಸಚಿವರಾಗಿ ನೇಮಿಸಲಾಯಿತು. ಈಗ ಅವರ ಹಾಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com