ಹಣಕ್ಕಾಗಿ ಪೀಡಿಸುತ್ತಿದ್ದ ನಕ್ಸಲರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಗ್ರಾಮಸ್ಥರು!

ಲಾಥೆಹರ್ ಜಿಲ್ಲೆಯ ಬರಿಯಾತು ಗ್ರಾಮದಲ್ಲಿ ಹಣಕ್ಕಾಗಿ ಪೀಡಿಸುತ್ತಿದ್ದ ನಕ್ಸಲರ ಮೇಲೆ ಗ್ರಾಮಸ್ಥರೆಲ್ಲಾ ಸೇರಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಗ್ರಾಮಸ್ಥರು
ಗ್ರಾಮಸ್ಥರು

ಜಾರ್ಖಂಡ್ :ಲಾಥೆಹರ್ ಜಿಲ್ಲೆಯ ಬರಿಯಾತು ಗ್ರಾಮದಲ್ಲಿ ಹಣಕ್ಕಾಗಿ ಪೀಡಿಸುತ್ತಿದ್ದ ನಕ್ಸಲರ ಮೇಲೆ  ಗ್ರಾಮಸ್ಥರೆಲ್ಲಾ ಸೇರಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಗ್ರಾಮದಲ್ಲಿ ನಡೆಯುವ ಪ್ರತಿಯೊಂದು ಕೆಲಸಗಳಿಗೂ ಇಂತಿಷ್ಟು ಹಣವನ್ನು ನಕ್ಸಲೀಯರಿಗೆ ಕೊಡಬೇಕು. ಒಂದು ವೇಳೆ ಕೊಡದೆ ಹೋದರೆ ಗ್ರಾಮಕ್ಕೆ ಬಂದು ನಕ್ಸಲೀಯರು ಹಲ್ಲೆ ಮಾಡುತ್ತಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಶೌಚಾಲಯ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರ ಬಿರೇಂದ್ರ ಸಿಂಗ್ 15 ಸಾವಿರ ರೂ. ಕೊಡುವಂತೆ ನಕ್ಸಲೀಯರು ಬೆದರಿಕೆ ಹಾಕಿದ್ದಾರೆ. ಇದನ್ನು  ಕೊಡಲು ಆತ ನಿರಾಕರಿಸಿದ್ದರಿಂದ  ಗುರುವಾರ ಮಧ್ಯ ರಾತ್ರಿ ಮನೆಗೆ ಬಂದು ಹಲ್ಲೆ ಮಾಡಲು ಮುಂದಾಗಿದ್ದಾರೆ. ಆಗ ಆತ ಓಡಿಬಂದು ಗ್ರಾಮಸ್ಥರ ನೆರವು ಕೋರಿದ್ದಾನೆ. ಆಗ ಗ್ರಾಮಸ್ಥರ ಸೇರಿ ನಕ್ಸಲರ ಮೇಲೆ ಮುಗಿ ಬಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com