ಚೆನ್ನೈ: ಕೇಂದ್ರದ ಮೋದಿ ಸರ್ಕಾರ ಇತ್ತೀಚಿಗೆ ರೂಪಿಸಲು ಉದ್ದೇಶಿಸಿರುವ ಉನ್ನತ ಶಿಕ್ಷಣ ಆಯೋಗದ ಮಸೂದೆ ಕೇಂದ್ರದ ಅಧಿಕಾರವನ್ನು ಏಕೀಕರಿಸುವ ಪ್ರಯತ್ನವಾಗಿದೆಯಾ ಎಂಬಂತಹ ಅನುಮಾನಗಳು ಕಾಡುತ್ತಿವೆ.
ಉನ್ನತ ಶಿಕ್ಷಣ ಆಯೋಗದ ಮಸೂದೆಯ ಕರಡು ಪದಗಳು ಮೋಸಗೊಳಿಸಬಾರದೆಂಬುದನ್ನು ತೋರಿಸುತ್ತವೆ. ಆದರೆ ವಾಸ್ತವವಾಗಿ ಇದು ಕುತಂತ್ರ. ಸ್ವಾಯತ್ತತೆ ಮತ್ತು ಏಕೀಕೃತ ಶಿಕ್ಷಣದಂತಹ ಅಪೇಕ್ಷಣೀಯ ಪದಗಳಿಂದ ಕರಡು ಮಸೂದೆಯನ್ನು ರೂಪಿಸಲಾಗಿದೆ.
ಮೊದಲನೆಯದಾಗಿ, ಕರಡು ಮಸೂದೆಯ ಮೂಲ ಗುರಿ ಅಸ್ತಿತ್ವದಲ್ಲಿರುವ ಮಾನದಂಡಗಳ ಆಧಾರದ ಮೇಲೆ ಸಾರ್ವಜನಿಕ ವಿಶ್ವವಿದ್ಯಾನಿಲಯಗಳಿಗೆ ಹಣವನ್ನು ವಿಶ್ವ ವಿದ್ಯಾನಿಲಯ ಧನ ಸಹಾಯ ಆಯೋಗ- ಯುಜಿಸಿಯನ್ನು ರದ್ದುಪಡಿಸುವುದು.
ವಿಶ್ವವಿದ್ಯಾನಿಲಯಗಳಿಗೆ ಹಣ ನೀಡುವ ಜವಾಬ್ದಾರಿಯನ್ನು ನೇರವಾಗಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯಕ್ಕೆ ವಹಿಸುವುದು. ಇದಕ್ಕಾಗಿಯೇ ಭಾರತದ ಉನ್ನತ ಶಿಕ್ಷಣ ಆಯೋಗವನ್ನು ಹೊಸದಾಗಿ ಸೃಷ್ಟಿಸುವ ಉದ್ದೇಶ ಹೊಂದಲಾಗಿದೆ.