ಶಶಿ ತರೂರ್ ಅವರ ಕಚೇರಿ ಎದುರು ಘೋಷಣೆ ಕೂಗಿ ಪ್ರತಿಭಟನೆ ನಡೆಸಿರುವ ಕಾರ್ಯಕರ್ತರು, ಕಚೇರಿಯೊಳಗೆ ನುಗ್ಗಿ ಹಿಂದೂ ಪಾಕಿಸ್ತಾನ ಕಚೇರಿ ಎಂಬ ಬ್ಯಾನರ್ ನ್ನೂ ಕಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಿರುವನಂತಪುರಂ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್ ಸುರೇಶ್, ಶಶಿ ತರೂರ್ ಅವರ ತಪ್ಪು ಹೇಳಿಕೆ ಬಗ್ಗೆ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ, ಇದೊಂದು ಸಹಜವಾದ ಪ್ರತಿಭಟನೆ ಎಂದು ಹೇಳಿದ್ದಾರೆ.