ಟೋಲ್ ಶುಲ್ಕ ಕೇಳಿದ್ದಕ್ಕೆ ಬ್ಯಾರಿಯರ್ ಮುರಿದ ದರ್ಪ ತೋರಿಸಿದ ಕೇರಳ ಶಾಸಕ

ಟೋಲ್ ಶುಲ್ಕ ಕೇಳಿದ್ದಕ್ಕೆ ಆಕ್ರೋಶಗೊಂಡ ಕೇರಳ ಶಾಸಕರೊಬ್ಬರು ಟೋಲ್ ಗೇಟ್ ನ ಬ್ಯಾರಿಯರ್...
ಪಿಸಿ ಜಾರ್ಜ್
ಪಿಸಿ ಜಾರ್ಜ್
ಪಲ್ಲಿಯೆಕ್ಕರಾ(ಕೇರಳ): ಟೋಲ್ ಶುಲ್ಕ ಕೇಳಿದ್ದಕ್ಕೆ ಆಕ್ರೋಶಗೊಂಡ ಕೇರಳ ಶಾಸಕರೊಬ್ಬರು ಟೋಲ್ ಗೇಟ್ ನ ಬ್ಯಾರಿಯರ್ ಮುರಿದು ದರ್ಪ ಪ್ರದರ್ಶಿಸಿದ ಮಂಗಳವಾರ ರಾತ್ರಿ ನಡೆದಿದೆ.
ನಿನ್ನೆ ಕೇರಳ ಶಾಸಕ ಪಿ.ಸಿ. ಜಾರ್ಜ್ ಅವರು ತ್ರಿಶೂರ್​ನಿಂದ ಕೊಚ್ಚಿ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ಸಂದರ್ಭ ಪಲ್ಲಿಯೆಕ್ಕರಾ ಟೋಲ್ ಬಳಿ ಕಾರನ್ನ ತಡೆದ ಟೋಲ್ ಸಿಬ್ಬಂದಿ ಶುಲ್ಕ ಪಾವತಿಸಲು ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಶಾಸಕ ಕಾರಿನಿಂದ ಇಳಿದು ಬಂದು ಬ್ಯಾರಿಯರ್ ಅನ್ನೇ ಮುರಿದಿದ್ದು, ಅದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇನ್ನು ಈ ಕುರಿತ ಪ್ರತಿಕ್ರಿಯಿಸಿರುವ ಶಾಸಕ ಜಾರ್ಜ್ ಅವರು, ಶಾಸಕ ಎಂಬ ನಾಮಫಲಕವಿದ್ದರೂ ನನ್ನ ಕಾರು ತೆರಳಲು ಅವಕಾಶ ಕೊಡಲಿಲ್ಲ ಎಂದಿದ್ದಾರೆ. 7 ಬಾರಿ ಶಾಸಕರಾಗಿ ಜಾರ್ಜ್ ಈ ಹಿಂದೆಯೂ ಹಲವು ಬಾರಿ ವಿವಾದಗಳಿಂದ ಸುದ್ದಿಯಾಗಿದ್ದರು.
ಪೂಂಜರ್ ಕ್ಷೇತ್ರದ ಶಾಸಕ ಪಿ.ಸಿ. ಜಾರ್ಜ್, ಫೆಬ್ರವರಿ 2017ರಂದು ಶಾಸಕರ ಭವನದಲ್ಲಿ ಊಟ ತರಲು ನಿಧಾನ ಮಾಡಿದ ಬಾಲಕನಿಗೆ ಕಪಾಳಮೋಕ್ಷ ಮಾಡಿ ಸುದ್ದಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com