ನಿನ್ನೆ ಕೇರಳ ಶಾಸಕ ಪಿ.ಸಿ. ಜಾರ್ಜ್ ಅವರು ತ್ರಿಶೂರ್ನಿಂದ ಕೊಚ್ಚಿ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ಸಂದರ್ಭ ಪಲ್ಲಿಯೆಕ್ಕರಾ ಟೋಲ್ ಬಳಿ ಕಾರನ್ನ ತಡೆದ ಟೋಲ್ ಸಿಬ್ಬಂದಿ ಶುಲ್ಕ ಪಾವತಿಸಲು ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಶಾಸಕ ಕಾರಿನಿಂದ ಇಳಿದು ಬಂದು ಬ್ಯಾರಿಯರ್ ಅನ್ನೇ ಮುರಿದಿದ್ದು, ಅದು ಸಿಸಿಟಿವಿಯಲ್ಲಿ ಸೆರೆಯಾಗಿದೆ.