ಮಸೂದೆ ಅಂಗೀಕಾರಕ್ಕೆ ಮುನ್ನ ಸಂಸತ್ತಿನಲ್ಲಿ ಸುಮಾರು ಎರಡು ಗಂಟೆಗಳ ಕಾಲ ಚರ್ಚೆ ನಡೆದಿದ್ದು ಪ್ರತಿಪಕ್ಷಗಳು ಸರ್ಕಾರದ ’ಪ್ರಾಮಾಣಿಕತೆ’ಯನ್ನು ಪ್ರಶ್ನಿಸಿದೆ. ಆರ್ ಎಸ್ ಪಿದಸ್ಯ ಎನ್. ಕೆ. ಪ್ರೇಮಚಂದ್ರನ್ ಸೇರಿ ಅನೇಕ ಪ್ರತಿಪಕ್ಷ ಸದಸ್ಯರು ವಿಜಯ್ ಮಲ್ಯ, ನೀರವ್ ಮೋದಿ, ಮತ್ತು ಮೆಹುಲ್ ಚೋಕ್ಸಿ ಮುಂತಾದ ಭ್ರಷ್ಠರನ್ನು ಬಿಜೆಪಿ ತನ್ನ ಆಳ್ವಿಕೆಯಲ್ಲಿಯೇ ದೇಶ ತೊರೆಯಲು ಅವಕಾಶ ನಿಡಿದೆ ಎಂದು ಆರೋಪಿಸಿದ್ದಾರೆ.