ಕಳೆದ ಬಾರಿ ಕೇಂದ್ರ ಸರ್ಕಾರದ ವಿರುದ್ಧ ಟಿಡಿಪಿ ಅವಿಶ್ವಾಸ ಮಂಡನೆಗೆ ಮುಂದಾಗಿದ್ದರಿಂದ ಇಡೀ ಕಲಾಪವೇ ಬಲಿಯಾಗಿತ್ತು. ಇದೀಗ ಅಂತಹ ತಪ್ಪನ್ನು ಮಾಡಲು ಕೇಂದ್ರ ಸರ್ಕಾರ ಸಿದ್ಧವಾಗಿಲ್ಲ. ಅವಿಶ್ವಾಸ ಮಂಡನೆ ಸಾಬೀತಿನ ವಿರುದ್ಧ ಮೋದಿ ಸರ್ಕಾರ ಆತ್ಮವಿಶ್ವಾಸ ಧೃಡವಾಗೇ ಇದೆ. ವಿಪಕ್ಷಗಳಿಗೆ ಅವಕಾಶ ನೀಡಿ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳ ಹಿಂದೆ ಅವಕಾಶವಾದಿ ಉದ್ದೇಶವಿದೆ ಎಂಬುವುದನ್ನು ತೋರಿಸಲು ಬಿಜೆಪಿ ಮುಂದಾಗಿದೆ.