1984 ರಲ್ಲಿ ಅತಿದೊಡ್ಡ ಸಾಮೂಹಿಕ ಹಲ್ಲೆಗಳು ಸಂಭವಿಸಿದ್ದವು -ರಾಜನಾಥ ಸಿಂಗ್

1984ರ ಸಿಖ್ ವಿರುದ್ಧದ ಹಿಂಸಾಚಾರದ ಸಂದರ್ಭದಲ್ಲಿ ದೊಡ್ಡ ಸಾಮೂಹಿಕ ಹಲ್ಲೆಗಳು ಸಂಭವಿಸಿದ್ದವು. ಈ ಬಗ್ಗೆ ನಾವು ಆತಂಕಗೊಂಡಿದ್ದೇವೆ ಎಂದು ರಾಜನಾಥ್ ಸಿಂಗ್ ಲೋಕಸಭೆಯಲ್ಲಿಂದು ಹೇಳಿದ್ದಾರೆ
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್
Updated on

ನವದೆಹಲಿ: ರಾಜಸ್ತಾನ ಆಳ್ವಾರ್ ಜಿಲ್ಲೆಯಲ್ಲಿ ಗೋವು ಕಳ್ಳನೆಂದು ಬಾವಿಸಿ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ನಡೆದ ಸಾಮೂಹಿಕ ಹಲ್ಲೆ ಪ್ರಕರಣ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿಂದು ಪ್ರತಿಧ್ವನಿಸಿತ್ತು.

ಸರ್ಕಾರ ಸಾಮೂಹಿಕ ಹಲ್ಲೆಗೆ ಬೆಂಬಲಿಸುತ್ತಿದೆ. ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಪ್ರತಿಪಕ್ಷಗಳು ಲೋಕಸಭೆಯಲ್ಲಿ ಆರೋಪಿಸಿದವು.ಈ ಕುರಿತು ಕೇಂದ್ರ ಗೃಹ ಸಚಿವ  ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಬೇಕೆಂದು ಆಗ್ರಹಿಸಿದವು.

ಈ ಸಂದರ್ಭ ಮಾತನಾಡಿದ ರಾಜನಾಥ್ ಸಿಂಗ್,  ಸಾಮೂಹಿಕ ಹಲ್ಲೆ  ಪ್ರಕರಣಗಳ ತನಿಖೆಗಾಗಿ  ಉನ್ನತ ಮಟ್ಟದ ತಂಡವನ್ನು  ರಚಿಸಲಾಗಿದೆ. ಒಂದು ವೇಳೆ ಅಗತ್ಯವಾದಲ್ಲೀ ಸಾಮೂಹಿಕ ಹಲ್ಲೆ ವಿರುದ್ಧದ ಕಾನೂನು ಜಾರಿಗೆ ಗಮನ ಹರಿಸಲಾಗುವುದು ಎಂದರು.

 ಇಂತಹ ಸಾಮೂಹಿಕ ಹಲ್ಲೆಗಳು ಇತ್ತೀಚಿಗೆ ಸಂಭವಿಸುತ್ತಿಲ್ಲ. ಹಲವು ವರ್ಷಗಳಿಂದಲೂ ನಡೆಯುತ್ತಾ ಬಂದಿದೆ. 1984ರ ಸಿಖ್ ವಿರುದ್ಧದ ಹಿಂಸಾಚಾರದ ಸಂದರ್ಭದಲ್ಲಿ ದೊಡ್ಡ ಸಾಮೂಹಿಕ ಹಲ್ಲೆಗಳು ಸಂಭವಿಸಿದ್ದವು. ಈ  ಬಗ್ಗೆ ನಾವು ಆತಂಕಗೊಂಡಿದ್ದೇವೆ ಎಂದು ರಾಜನಾಥ್ ಸಿಂಗ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com