ರಾಫೆಲ್ ಒಪ್ಪಂದ ಎರಡು ಸರ್ಕಾರಗಳ ನಡುವೆ ನಡೆದಿರುವ ಒಪ್ಪಂದವಾಗಿದ್ದು ರಾಹುಲ್ ಗಾಂಧಿ ಆರೋಪದಲ್ಲಿ ಹುರುಳಿಲ್ಲ ಎಂದು ಜೇಟ್ಲಿ ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್ ವಿರುದ್ಧ ರಾಜಕೀಯ ವಿಷಯವಾಗಿಯೂ ಅರುಣ್ ಜೇಟ್ಲಿ ವಾಗ್ದಾಳಿ ನಡೆಸಿದ್ದು, ಯಾವುದೇ ವಿಷಯವೂ ಸಿಗದೇ ಕಾಂಗ್ರೆಸ್ ಪಕ್ಷ ದೇಶದ ಬಹುಸಂಖ್ಯಾತರ ಮೇಲಿನ ದಾಳಿ, ಆರೋಪ ಮಾಡುವುದಕ್ಕೆ ಸೆಕ್ಯುಲರಿಸಂ (ಜಾತ್ಯಾತೀತತೆಯ) ಎಂಬ ಸೌಮ್ಯೋಕ್ತಿಯನ್ನು ಬಳಕೆ ಮಾಡುತ್ತಿದೆ ಎಂದು ಜೇಟ್ಲಿ ಆರೋಪಿಸಿದ್ದಾರೆ.