ರಾಂಪುರ್: ಗುಂಪು ಹಲ್ಲೆ ಭೀತಿಯಿಂದ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ಅವರ ಪತ್ನಿ, ರಾಜ್ಯಸಭಾ ಸದಸ್ಯೆ ತಜೀಮ್ ಫಾತಿಮಾ ಅವರು ತಮಗೆ ಸ್ವಾಮೀಜಿಯೊಬ್ಬರು ಉಡುಗೊರೆಯಾಗಿ ನೀಡಿದ್ದ ಗೋವನ್ನು ವಾಪಸ್ ಮಾಡಿದ್ದಾರೆ.
ಗುಂಪು ಹಲ್ಲೆ ಭೀತಿಯಿಂದ ಉಡುಗೊರೆಯಾಗಿ ನೀಡಿದ್ದ ಗೋವನ್ನು ವಾಪಸ್ ನೀಡಿದ್ದೇವೆ. ಇದು ಅತ್ಯಂತ ನೋವಿನ ವಿಷಯ. ಯಾರಾದರೂ ಆ ಸುಂದರ ಗೋವನ್ನು ಕೊಂದು ಆರೋಪವನ್ನು ನಮ್ಮ ಮೇಲೆ ಹೊರಿಸಬಹುದು ಎಂಬ ಭೀತಿಯಿಂದ ಅದನ್ನು ವಾಪಸ್ ನೀಡಿದ್ದೇವೆ ಎಂದು ಫಾತಿಮಾ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ದೇಶದಲ್ಲಿ ಅಲ್ಪಸಂಖ್ಯಾತರಿಗೆ ಭೀತಿಯ ವಾತಾವರಣ ಸೃಷ್ಟಿಸಿದೆ ಎಂದು ಫಾತಿಮಾ ಆರೋಪಿಸಿದ್ದಾರೆ.
ಗೋವರ್ಧನ ಪೀಠದ ಶಂಕರಾಚಾರ್ಯ ಅಧೋಕ್ಷಜಾನಂದ ಮಹಾರಾಜ್ ಅವರು ಆಜಂ ಖಾನ್ ಕುಟುಂಬಕ್ಕೆ ಗೋವನ್ನು ಉಡುಗೊರೆಯಾಗಿ ನೀಡಿದ್ದರು.