2008 ರ ಸೆಪ್ಟೆಂಬರ್ ನಲ್ಲಿ ಪಂಜಾಬ್ ವಿಜಿಲೆನ್ಸ್ ಬ್ಯೂರೊ ಈ ಪ್ರಕರಣವನ್ನು ದಾಖಲಿಸಿತ್ತು. ಕ್ಯಾಪ್ಟನ್ ಅಮರೀಂದರ್ ಸಿಂಗ್ ಹಾಗೂ ಇತರರ ಮೇಲೆ ವಂಚನೆ, ವಂಚನೆ ಉದ್ದೇಶಕ್ಕಾಗಿ ನಕಲಿ, ದಾಖಲೆ ಸೃಷ್ಟಿ, ಕ್ರಿಮಿನಲ್ ಪಿತೂರಿ ದೂರನ್ನು ದಾಖಲಿಸಿಅಲಾಗಿತ್ತು. ಅಮೃತಸರ್ ಇಂಪ್ರೂವ್ಮೆಂಟ್ ಟ್ರಸ್ಟ್ (ಎಐಟಿ) ಗೆ ಸೇರಿದ್ದ 32.1 ಎಕರೆ ಭೂಮಿಯನ್ನು ಅಕ್ರಮವಾಗಿ ಖಾಸಗಿಯವರಿಗೆ ನಿಡಿರುವುದರ ಕುರಿತಂತೆ ತನಿಖೆ ಆಗಬೇಕೆಂದು ಅಂದು ಪಂಜಾಬ್ ವಿಧಾನಸಭೆ ತಿರ್ಮಾನ ತೆಗೆದುಕೊಂಡಿತ್ತು.