ರಾಜಕಾರಣಿಗಳು ಸೇರಿದಂತೆ, ಕೆಲವು ವರ್ಗಗಳ ಜನರು ಕಾಳಜಿ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ತಿಂಗಳ ಪ್ರಾರಂಭದಲ್ಲಿ ಕೇಂದ್ರವು ವಿವಾದಿತ ಮಸೂದೆಯನ್ನು ಹಿಂಅಡೆಯುವುದಾಗಿ ನಿರ್ಧರಿಸಿತು. "ಸರ್ಕಾರವು ಮಸೂದೆಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ ಎಂದು ಸಚಿವ ಪಿಯೂಷ್ ಗೋಯಲ್ ಸಮಿತಿಯ ಅಧ್ಯಕ್ಷರಿಗೆ ಬರೆದಿದ್ದಾರೆ ... ಇದು ಪ್ರತಿಪಕ್ಷದ ವಿಜಯವಾಗಿದೆ" ಎಂದು ರಾಯ್ ಹೇಳಿದ್ದಾರೆ. ದಿವಾಳಿತನ ಸಂಹಿತೆ (2 ನೇ ತಿದ್ದುಪಡಿ) ಮಸೂದೆಯ ಕುರಿತು ಚರ್ಚೆಯಲ್ಲಿ ಭಾಗವಹಿಸಿದ್ದ ಅವರು ಈ ಮಾತನ್ನು ಹೇಳಿದ್ದಾರೆ.