ಪ್ರಣಬ್ ಮುಖರ್ಜಿ ಆರ್ ಎಸ್ಎಸ್ ಕಾರ್ಯಕ್ರಮಕ್ಕೆ ಹೋಗುವುದು ತಪ್ಪಲ್ಲ: 'ಕೈ' ನಾಯಕ ಸುಶೀಲ್ ಕುಮಾರ್ ಶಿಂಧೆ

ಕಾಂಗ್ರೆಸ್ ನ ನಾಯಕ ಮಾಜಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಪ್ರಣಬ್ ಮುಖರ್ಜಿ ಬೆನ್ನಿಗೆ ನಿಂತಿದ್ದಾರೆ.
ಸುಶೀಲ್ ಕುಮಾರ್ ಶಿಂಧೆ
ಸುಶೀಲ್ ಕುಮಾರ್ ಶಿಂಧೆ
ನಾಗ್ಪುರ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರ್ ಎಸ್ಎಸ್ ಕಾರ್ಯರಕ್ರಮದಲ್ಲಿ ಭಾಗವಹಿಸುತ್ತಿರುವುದು ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ವಿಷಯ. ಪ್ರಣಬ್ ಮುಖರ್ಜಿ ಪರ, ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ನ ನಾಯಕ ಮಾಜಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಪ್ರಣಬ್ ಮುಖರ್ಜಿ ಬೆನ್ನಿಗೆ ನಿಂತಿದ್ದಾರೆ. 
"ಪ್ರಣಬ್ ಮುಖರ್ಜಿ ಜಾತ್ಯಾತೀತ ವ್ಯಕ್ತಿ, ಅವರು ಎಂದಿಗೂ ಜಾತ್ಯಾತೀತ ತತ್ವಗಳನ್ನೇ ಮುಂದಿಡುತ್ತಾರೆ, ಆರ್ ಎಸ್ಎಸ್ ಕಾರ್ಯಕ್ರಮದಲ್ಲಿಯೂ ಅವರು ಅದನ್ನೇ ಮಾಡಲಿದ್ದಾರೆ, ಪ್ರಣಬ್ ಮುಖರ್ಜಿ ಆರ್ ಎಸ್ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದರಲ್ಲಿ ತಪ್ಪೇನು ಇಲ್ಲ ಎಂದು ಹೇಳಿದ್ದಾರೆ. 
ಪ್ರಣಬ್ ಮುಖರ್ಜಿಯವರು ಆರ್ ಎಸ್ಎಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರ ಚಿಂತನೆಗಳು ಕಾರ್ಯಕರ್ತರಲ್ಲಿ ಬದಲಾವಣೆ ತಂದರೆ  ನಮಗೆ ಸಂತೋಷ ಉಂಟಾಗುತ್ತದೆ ಎಂದು ಶಿಂಧೆ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com