ಬ್ಯಾಂಕ್ ಗಳಿಗೆ ಬರಬೇಕಿರುವ ಬಾಕಿ ಸಾಲವನ್ನು ಉಲ್ಲೇಖಿಸಿರುವ ಸಂಸತ್ ಸಮಿತಿ, ಬ್ಯಾಂಕಿಂಗ್ ಹಗರಣಗಳಲ್ಲಿ ಬ್ಯಾಂಕ್ ನ ಅಧಿಕಾರಿಗಳು ಹಾಗೂ ಬ್ಯಾಂಕ್ ಸದಸ್ಯರ ನಂಟನ್ನೂ ಪ್ರಶ್ನಿಸಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಸೇರಿದಂತೆ ಇತರ ಬ್ಯಾಂಕ್ ಹಗರಣಗಳು ನಡೆದಿರುವ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗೌರ್ನರ್ ಉರ್ಜಿತ್ ಪಟೇಲ್ ಸಮಿತಿಯ ಎದುರು ಮುಂದಿನ ವಾರ ಹಾಜರಾಗಲಿದ್ದು, ಇದಕ್ಕೂ ಮುನ್ನ ಸಂಸದೀಯ ಸಮಿತಿ ಸಭೆ ನಡೆಸಿದೆ.