ಈ ಬಗ್ಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹಂಸ್ ರಾಜ್ ಅಹಿರ್ ಮಾತನಾಡಿದ್ದು, ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾದನೆಯನ್ನು ಮುಂದುವರೆಸಿದರೆ ರಂಜಾನ್ ನ್ನೂ ಲೆಕ್ಕಿಸದೇ ಸೇನಾ ಕಾರ್ಯಾಚರಣೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಮೊದಲು ದಾಳಿ ಮಾಡದೇ ಇರುವ ನಿಯಮಕ್ಕೆ ಭಾರತ ಎಂದಿಗೂ ಬದ್ಧವಾಗಿದೆ. ಆದರೆ ಪಾಕಿಸ್ತಾನ ತನ್ನ ನಡೆಯನ್ನು ತಿದ್ದುಕೊಳ್ಳದಿದ್ದರೆ ರಂಜಾನ್ ನ್ನೂ ಲೆಕ್ಕಿಸದೇ ಸೇನಾ ಕಾರ್ಯಾಚರಣೆ ಮುಂದುವರೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.