ಆರು ಗಂಟೆಗಳ ಕಾಲ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿದೆ. ಅದರಲ್ಲಿ ಅರ್ಧಕ್ಕೂ ಹೆಚ್ಚು ಸಮಯವನ್ನು ದೋಷವಿಲ್ಲದೆ ಉತ್ತರ ಟೈಪ್ ಮಾಡಲು, ಹೇಳಿಕೆ ಓದಲು ಹಾಗೂ ಪಠಣ ಮಾಡಲು ತೆಗೆದುಕೊಳ್ಳಲಾಗಿದೆ ಎಂದು ಚಿದಂಬರಂ ಹೇಳಿದ್ದಾರೆ.
ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಜಾರಿ ನಿರ್ದೇಶನಾಲಯ ಇಂದು ಚಿದಂಬರಂ ಅವರ ಹೇಳಿಕೆಯನ್ನು ದಾಖಲು ಮಾಡಿಕೊಂಡಿದೆ.
3, 500 ಕೋಟಿ ಮೊತ್ತದ ಏರ್ ಸೆಲ್- ಮ್ಯಾಕ್ಸಿಲ್ ಒಪ್ಪಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕಾರ್ತಿ ಚಿದಂಬರಂ ಅವರನ್ನು ವಿಚಾರಣೆಗೆ ಒಳಪಡಿಸಿದ ನಂತರ ಚಿದಂಬರಂ ಅವರ ಪಾತ್ರ ಕೇಳಿಬಂದಿತ್ತು.
ಜಾರಿನಿರ್ದೇಶನಾಲಯದಿಂದ ಬಂಧನದಿಂದ ಪಾರು ಮಾಡುವಂತೆ ಕಳೆದ ವಾರ ಚಿದಂಬರಂ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಒ ಪಿ ಸೈನಿ ಬಳಿ ಮನವಿ ಮಾಡಿಕೊಂಡಿದ್ದರು. ಜುಲೈ 10 ರವೆರೆಗೂ ಅವರನ್ನು ಬಂಧಿಸದಂತೆ ಇದೇ ನ್ಯಾಯಾಲಯ ಇಂದು ಇಡಿಗೆ ನಿರ್ದೇಶನ ನಿರ್ದೇಶಿಸಿತು.