13 ರಾಷ್ಟ್ರೀಯ ರೈಫಲ್ಸ್(RR) ಬಂಡಿಪೋರ ಜಿಲ್ಲೆಯ ಹಜಿನ್ ನಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು, ಭದ್ರತಾ ಸಿಬ್ಬಂದಿಗಳು ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ. ರಂಜಾನ್ ವೇಳೆಯಲ್ಲಿ ಸೇನಾ ಕಾರ್ಯಾಚರಣೆ ನಡೆಸದಂತೆ ಭಾರತ ಸ್ವಯಂ ನಿಯಂತ್ರಣ ವಿಧಿಸಿಕೊಂಡಿದೆ. ಆದರೆ ಸೇನಾ ಪಡೆಗಳ ಮೇಲೆ ದಾಳಿ ನಡೆದಿದ್ದೇ ಆದಲ್ಲಿ ಪ್ರತ್ಯ್ತುತ್ತರ ನೀಡಲು ಸೇನೆಗೆ ಅಧಿಕಾರ ನೀಡಲಾಗಿದ್ದು, ಭಯೋತ್ಪಾದಕರು ಹಾಗೂ ಪಾಕಿಸ್ತಾನದ ಗುಂಡಿನ ದಾಳಿಗೆ ಸೇನೆ ಸಮರ್ಥ ಉತ್ತರ ನೀಡುತ್ತಿದೆ.