ಸ್ವಯಂಘೋಷಿತ ಧರ್ಮ ಗುರು ಭಯ್ಯೂಜಿ ಮಹಾರಾಜ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ!

ಸ್ವಯಂ ಘೋಷಿತ ದೇವಮಾನವ ಭಯ್ಯೂಜಿ ಮಹಾರಾಜ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ...
ಭಯ್ಯೂಜಿ ಮಹಾರಾಜ್
ಭಯ್ಯೂಜಿ ಮಹಾರಾಜ್
Updated on
ಇಂದೋರ್: ಸ್ವಯಂ ಘೋಷಿತ ದೇವಮಾನವ ಭಯ್ಯೂಜಿ ಮಹಾರಾಜ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 
ಗುಂಡು ಹಾರಿಸಿಕೊಂಡು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಬೈಯ್ಯಾಜಿ ಮಹಾರಾಜ್ ರನ್ನು ಕೂಡಲೇ ಬಾಂಬೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. 
ದೊಡ್ಡ ಪ್ರಮಾಣದಲ್ಲಿ ಅನುಯಾಯಿಗಳನ್ನು ಹೊಂದಿರುವ ಮಹಾರಾಜ್ 2016ರ ಏಪ್ರಿಲ್ ನಲ್ಲಿ ಸಾರ್ವಜನಿಕ ಜೀವನದಿಂದ ನಿವೃತ್ತಿ ಘೋಷಿಸಿದ್ದರು. ಕಳೆದ ವರ್ಷದ ಏಪ್ರಿಲ್ ನಲ್ಲಿ ಮಧ್ಯಪ್ರದೇಶ ಸರ್ಕಾರ ಅವರಿಗೆ ಸಚಿವರ ಸ್ಥಾನಮಾನ ನೀಡಿ ಗೌರವಿಸಿತ್ತು. 
ಭಯ್ಯಾಜಿ ಅವರ ಮೂಲ ಹೆಸರು ಉದಯಸಿನ್ಹ ದೇಶ್ ಮುಖ್. ಸ್ವಯಂಘೋಷಿತ ಮಾನವ ಎಂದು ಘೋಷಣೆ ನಂತರ ಅವರು ಭಯ್ಯೂಜಿ ಮಹಾರಾಜ್ ಎಂದೇ ಖ್ಯಾತರಾಗಿದ್ದರು. ಸದ್ಗುರು ದತ್ತ ಧಾರ್ಮಿಕ್ ಏವಂ ಪಾರಮಾರ್ಥಿಕ್ ಟ್ರಸ್ಟ್ ಮತ್ತು ಸೂರ್ಯೋದಯ ಆಶ್ರಮದಂತಹ ಸಂಸ್ಥೆಗಳ ಸ್ಥಾಪಕರಾಗಿದ್ದಾರೆ. 
2011ರಲ್ಲಿ ಅಣ್ಣಾ ಹಜಾರೆಯವರು ಲೋಕಪಾಲ ವಿಧೇಯಕಕ್ಕಾಗಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಘೋಷಿಸಿದಾಗ ಭಯ್ಯೂಜಿ ಮಹಾರಾಜ್ ದೇಶದ ಗಮನ ಸೆಳೆದಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com