ಜಾರ್ಖಂಡ್ :'ಜೈಶ್ರೀರಾಮ್' ಜಪಿಸುವಂತೆ ಮುಸ್ಲಿಂ ಧರ್ಮಗುರು ಮೇಲೆ ಹಲ್ಲೆ

ಮುಸ್ಲಿಂ ಧರ್ಮ ಗುರು ಒಬ್ಬರ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಜಾರ್ಖಂಡ್ ನ ರಾಂಚಿಯಲ್ಲಿ ನಡೆದಿದೆ. ...
ಹಲ್ಲೆಗೊಳಗಾದ ವ್ಯಕ್ತಿಯ ತಂದೆ
ಹಲ್ಲೆಗೊಳಗಾದ ವ್ಯಕ್ತಿಯ ತಂದೆ
Updated on
ರಾಂಚಿ: ಮುಸ್ಲಿಂ ಧರ್ಮ ಗುರು ಒಬ್ಬರ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಜಾರ್ಖಂಡ್ ನ ರಾಂಚಿಯಲ್ಲಿ ನಡೆದಿದೆ. 
ಅಜರ್ ಉಲ್ ಇಸ್ಲಾಂ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ, ಸಂಜೆ ತಾವು ಪ್ರಾರ್ಥನೆ ಮುಗಿಸಿ ವಾಪಾಸಾಗುವಾಗ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ನಡೆಸಿದೆ ಎಂದು ಹೇಳಲಾಗಿದೆ.
ಅಜರ್ ಬಳಿ ಬಂದ ಗುಂಪೊಂದು ಜೈ ಶ್ರೀರಾಮ್ ಎಂದು ಮಂತ್ರ ಜಪಿಸುವಂತೆ ಹೇಳಿದೆ. ಆದರೆ ಅದಕ್ಕೊಪ್ಪದೇ ಇದ್ದ ಕಾರಣ ತಮ್ಮ ಮಗನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಅಜರ್ ತಂದೆ ಆರೋಪಿಸಿದ್ದಾರೆ. 
ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ತಲೆ, ಕೈ ಹಾಗೂ ಕಾಲು ಸೇರಿದಂತೆ ದೇಹದ ಹಲವು ಭಾಗಗಳಲ್ಲಿ ಗಾಯಗಳಾಗಿವೆ. 
ಜೂನ್ ತಿಂಗಳ ಆರಂಭದಲ್ಲಿ ಗುಂಪೊಂದು ಹರ್ಯಾಣದ ಕರ್ನಾಲ್ ನ ಮಸೀದಿಯಲ್ಲಿ ನಮಾಜ್ ಮಾಡುವ ವೇಳೆ ದಾಳಿ ನಡೆಸಿ ಹಲವರ ಮೇಲೆ ಹಲ್ಲೆ ಮಾಡಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com