ಕಾಂಗ್ರೆಸ್ ನಿಂದ ಹಿಂದೂಗಳ ಓಲೈಕೆ, ಇಫ್ತಾರ್ ಕೂಟ ಬೂಟಾಟಿಕೆ: ಅಸಾದುದ್ದೀನ್ ಓವೈಸಿ

ಕಾಂಗ್ರೆಸ್ ವಿರುದ್ಧ ಹಿಂದೂಗಳನ್ನು ಓಲೈಕೆ ಮಾಡುತ್ತಿರುವ ಆರೋಪ ಮಾಡಿರುವ ಎಂಐಎಂ ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ, ಕಾಂಗ್ರೆಸ್ ಇಫ್ತಾರ್ ಕೂಟ ಆಯೋಜಿಸಿದ್ದು ಬೂಟಾಟಿಕೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಿಂದ ಹಿಂದೂಗಳ ಓಲೈಕೆ, ಇಫ್ತಾರ್ ಕೂಟ ಬೂಟಾಟಿಕೆ: ಅಸಾದುದ್ದೀನ್ ಓವೈಸಿ
ಕಾಂಗ್ರೆಸ್ ನಿಂದ ಹಿಂದೂಗಳ ಓಲೈಕೆ, ಇಫ್ತಾರ್ ಕೂಟ ಬೂಟಾಟಿಕೆ: ಅಸಾದುದ್ದೀನ್ ಓವೈಸಿ
ಕಾಂಗ್ರೆಸ್ ವಿರುದ್ಧ ಹಿಂದೂಗಳನ್ನು ಓಲೈಕೆ ಮಾಡುತ್ತಿರುವ ಆರೋಪ ಮಾಡಿರುವ ಎಂಐಎಂ ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ, ಕಾಂಗ್ರೆಸ್ ಇಫ್ತಾರ್ ಕೂಟ ಆಯೋಜಿಸಿದ್ದು ಬೂಟಾಟಿಕೆ ಎಂದು ಹೇಳಿದ್ದಾರೆ. 
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಯೋಜಿಸಿದ್ದ ಇಫ್ತಾರ್ ಕೂಟದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಸಾದುದ್ದೀನ್ ಓವೈಸಿ ಇಫ್ತಾರ್ ಕೂಟ ಆಯೋಜನೆ ಕೇವಲ ಬೂಟಾಟಿಕೆ ಆಗಿದ್ದು, ಮುಸ್ಲಿಮರ ಸಬಲೀಕರಣದ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಬದ್ಧತೆ ಇಲ್ಲ ಎಂದು ಆರೋಪಿಸಿದ್ದಾರೆ. 
ಕಾಂಗ್ರೆಸ್ ಪಕ್ಷ ಓಟ್ ಬ್ಯಾಂಕ್ ರಾಜಕಾರಣದಲ್ಲಿ ತೊಡಗಿದೆ ಎಂದು ಆರೋಪಿಸಿರುವ ಒವೈಸಿ, ಕಾಂಗ್ರೆಸ್ ಮುಸ್ಲಿಮರ ಸಬಲೀಕರಣದ ವಿಷಯದಲ್ಲಿ ಬೂಟಾಟಿಕೆ ಮಾಡುತ್ತಿದ್ದು, ಹಿಂದೂಗಳನ್ನು ಓಲೈಸಲು ಮುಂದಾಗಿದೆ ಎಂದು ಅಸಮಾಧಾನಗೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com