ಊಟಿ: ಪ್ರಪಾತಕ್ಕೆ ಬಿದ್ದ ಸರ್ಕಾರಿ ಬಸ್, ಆರು ಮಂದಿ ಸಾವು

ಕೊಯಂಬತ್ತೂರಿನಿಂದ ಊಟಿಗೆ ತೆರಳುತ್ತಿದ್ದ ಸರ್ಕಾರ ಬಸ್ ಗುರುವಾರ ನಿಲಗಿರಿ ಜಿಲ್ಲೆಯ ಮಂತಡ ಬಳಿ ಚಾಲಕನ...
ಅಪಘಾತಕ್ಕಿಡಾದ ಬಸ್
ಅಪಘಾತಕ್ಕಿಡಾದ ಬಸ್
ಕೊಯಂಬತ್ತೂರು: ಕೊಯಂಬತ್ತೂರಿನಿಂದ ಊಟಿಗೆ ತೆರಳುತ್ತಿದ್ದ ಸರ್ಕಾರ ಬಸ್ ಗುರುವಾರ ನಿಲಗಿರಿ ಜಿಲ್ಲೆಯ ಮಂತಡ ಬಳಿ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿ ಬಿದ್ದಿದ್ದು, ಘಟನೆಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ ಮತ್ತು 25 ಮಂದಿ ಗಾಯಗೊಂಡಿದ್ದಾರೆ.
ಇಂದು ಬೆಳಗ್ಗೆ ಊಟಿ ಕೂನೂರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ತಮಿಳುನಾಡು ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಸುಮಾರು 40 ಪ್ರಯಾಣಿಕರಿದ್ದರು ಎನ್ನಲಾಗಿದೆ.
ಬಸ್ ಸುಮಾರು 100 ಮೀಟಲ್ ಆಳದ ಪ್ರಪಾತಕ್ಕೆ ಬಿದಿದ್ದು, ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 25 ಮಂದಿ ಗಾಯಗೊಂಡಿದ್ದು ಅವರನ್ನು ಊಟಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ 10 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com