ದಲಿತ ಬಾಲಕರನ್ನು ನಗ್ನಗೊಳಿಸಿ ಹಿಂಸೆ 'ಅಮಾನವೀಯ': ಇದಕ್ಕೆ ಬಿಜೆಪಿ, ಆರ್‌ಎಸ್‌ಎಸ್ ಕಾರಣ ಎಂದ ರಾಹುಲ್

ಮೇಲ್ಜಾತಿಯ ಕೃಷಿಕನ ಜಮೀನಿನಲ್ಲಿದ್ದ ಬಾವಿಯಲ್ಲಿ ಈಜಾಡಿದ ಮೂವರು ದಲಿತ ಬಾಲಕರನ್ನು ನಗ್ನಗೊಳಿಸಿ ಅವರನ್ನು ಥಳಿಸಿ ಹಿಂಸೆ ನೀಡಿರುವುದನ್ನು...
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on
ಜಳಗಾಂವ್ (ಮಹಾರಾಷ್ಟ್ರ): ಮೇಲ್ಜಾತಿಯ ಕೃಷಿಕನ ಜಮೀನಿನಲ್ಲಿದ್ದ ಬಾವಿಯಲ್ಲಿ ಈಜಾಡಿದ ಮೂವರು ದಲಿತ ಬಾಲಕರನ್ನು ನಗ್ನಗೊಳಿಸಿ ಅವರನ್ನು ಥಳಿಸಿ ಹಿಂಸೆ ನೀಡಿರುವುದನ್ನು ಖಂಡಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇದಕ್ಕೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರಣ ಎಂದು ಹೇಳಿದ್ದಾರೆ. 
ಮಹಾರಾಷ್ಟ್ರದ ಜಳಗಾಂವ್ ನಲ್ಲಿ ಈ ಘಟನೆ ನಡೆಸಿದ್ದು ದೇಶಾದ್ಯಂತ ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಕ್ಕೆ ಆರ್‌ಎಸ್‌ಎಸ್ ಮತ್ತು ಕೇಂದ್ರದಲ್ಲಿನ ಬಿಜೆಪಿ ಸರ್ಕಾರವೇ ಕಾರಣ ಎಂದು ದೂರಿದ್ದಾರೆ. 
ಬಿಜೆಪಿ ಮತ್ತು ಆರ್‌ಎಸ್‌ಎಸ್ ನ ದ್ವೇಷ ರಾಜಕಾರಣದ ವಿರುದ್ಧ ನಾವು ಧ್ವನಿ ಎತ್ತದೇ ಹೋದರೆ ಇತಿಹಾಸ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ರಾಹುಲ್ ಹೇಳಿದ್ದಾರೆ. ಅಲ್ಲದೆ ತಮ್ಮ ಟ್ವೀಟರ್ ಖಾತೆಯಲ್ಲಿ ದಲಿತ ಬಾಲಕರ ಮೇಲೆ ಮೇಲ್ಜಾತಿಯವರಿಂದ ನಡೆದ ಹಿಂಸೆ ದೌರ್ಜನ್ಯದ ವಿಡಿಯೋವನ್ನು ಅಪ್ ಲೋಡ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com