ಅಮರನಾಥ ಯಾತ್ರೆ ನಂತರ ಜಮ್ಮು ಕಾಶ್ಮೀರಕ್ಕೆ ನೂತನ ರಾಜ್ಯಪಾಲರ ನೇಮಕ ಸಾಧ್ಯತೆ

ಅಮರನಾಥ ಯಾತ್ರೆಯ ನಂತರ ಜಮ್ಮು ಕಾಶ್ಮೀರಕ್ಕೆ ನೂತನ ರಾಜ್ಯಪಾಲರನ್ನು ನೇಮಕ ಮಾಡುವ ಸಾಧ್ಯತೆಯಿದೆ ಎಂದು ಜಮ್ಮು ಕಾಶ್ಮೀರ ಮಾಜಿ ಡಿಸಿಎಂ...
ಕಾವಿಂದರ್ ಗುಪ್ತಾ
ಕಾವಿಂದರ್ ಗುಪ್ತಾ
ಜಮ್ಮು: ಅಮರನಾಥ ಯಾತ್ರೆಯ ನಂತರ  ಜಮ್ಮು ಕಾಶ್ಮೀರಕ್ಕೆ ನೂತನ ರಾಜ್ಯಪಾಲರನ್ನು ನೇಮಕ ಮಾಡುವ ಸಾಧ್ಯತೆಯಿದೆ ಎಂದು ಜಮ್ಮು ಕಾಶ್ಮೀರ ಮಾಜಿ ಡಿಸಿಎಂ ಕಾವಿಂದರ್ ಗುಪ್ತಾ ಹೇಳಿದ್ದಾರೆ.
ಹೊಸ ರಾಜ್ಯಪಾಲರನ್ನು ನೇಮಕ ಮಾಡುವುದು ನಿಯಮವಾಗಿದೆ. ಕೇಂದ್ರ ಸರ್ಕಾರ ಇದರ ಬಗ್ಗೆ ಗಮನ ಹರಿಸಲಿದೆ ಎಂದು ಹೇಳಿದ್ದಾರೆ.  ಅಮರನಾಥ ಯಾತ್ರೆ ನಂತರ ಇದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಜೂನ್ 28 ರಂದು ಅಮರನಾಥ ಯಾತ್ರೆ ಆರಂಭವಾಗಲಿದ್ದು,  2 ತಿಂಗಳ ನಂತರ ಪೂರ್ಣಗೊಳ್ಳಲಿದೆ. 
2008 ರಲ್ಲಿ ಯುಪಿಎ ಸರ್ಕಾರ  ಎನ್ ಎನ್ ವೊಹ್ರಾ ಅವರನ್ನು ನೇಮಕ ಮಾಡಲಾಗಿತ್ತು. ಯುಪಿಎ ಸರ್ಕಾರ ನೇಮಿಸಿದ್ದ ಹಲವು ರಾಜ್ಯಪಾಲರು ಅಧಿಕಾರದಲ್ಲಿ ಮುಂದುವರಿದಿದ್ದಾರೆ. ಯಾವುದೇ ಹೊಸ ಸರ್ಕಾರ ರಚನೆಯಾಗುವ ಸಾಧ್ಯತೆಯಿಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com