ಪಾಕಿಸ್ತಾನ ಹಾಗೂ ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆ ನಡೆಸುವುದು, ಸೇನೆ ಮೇಲೆ ಕಲ್ಲು ತೂರಾಟ ನಡೆಸಿದವರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯುವುದು, ಏಕಪಕ್ಷೀಯವಾಗಿ ಕದನವಿರಾಮ ಹಾಕುವುದು ಪಿಡಿಪಿಯ ಬೇಡಿಕೆಗಳಾಗಿದ್ದವು. ಈ ಬೇಡಿಕೆಗಳ ಬಗ್ಗೆ ಪಿಡಿಪಿಗೆ ಹೆಮ್ಮೆ ಇದೆ, ಬಿಜೆಪಿ ಮೈತ್ರಿ ತೊರೆಯಲು ನೀಡಿರುವ ಕಾರಣವೂ ಸಹ ಇದೇ ಬೇಡಿಕೆಗಳಾಗಿದೆ. ಆದರೆ ಕಾಶ್ಮೀರದ ಜನತೆಯ ಹಿತಾಸಕ್ತಿಯನ್ನು ಕಾಪಾಡಲು ಎಷ್ಟು ಬಾರಿ ಬೇಕಾದರೂ ಅಧಿಕಾರ ತ್ಯಾಗ ಮಾಡುವುದಕ್ಕೆ ನಾವು ಸಿದ್ಧವಿದ್ದೇವೆ ಎಂದು ಪಿಡಿಪಿ ಹೇಳಿದೆ.