ತಿನಿಸುಗಳಿಗೆ ದುಬಾರಿ ಬೆಲೆ: ಮಲ್ಟಿಪ್ಲೆಕ್ಸ್ ಪ್ರತಿನಿಧಿ ಮೇಲೆ ಎಂಎನ್ಎಸ್ ಕಾರ್ಯಕರ್ತರಿಂದ ಹಲ್ಲೆ

ಮಾಜಿ ಕಾರ್ಪೋರೇಟರ್ ಸೇರಿದಂತೆ ಎಂಎನ್ಎಸ್ ಕಾರ್ಯಕರ್ತರ ತಂಡ, ಚಿತ್ರಮಂದಿರದ ಒಳಗೆ ಆಹಾರ ಪದಾರ್ಥಗಳಿಗೆ ಹೆಚ್ಚು ಬೆಲೆ...
ರಾಜ್ ಠಾಕ್ರೆ
ರಾಜ್ ಠಾಕ್ರೆ
Updated on
ಪುಣೆ: ಮಾಜಿ ಕಾರ್ಪೋರೇಟರ್ ಸೇರಿದಂತೆ ಎಂಎನ್ಎಸ್ ಕಾರ್ಯಕರ್ತರ  ತಂಡ, ಚಿತ್ರಮಂದಿರದ ಒಳಗೆ ಆಹಾರ ಪದಾರ್ಥಗಳಿಗೆ ಹೆಚ್ಚು ಬೆಲೆ ವಿಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಲ್ಟಿಪ್ಲೆಕ್ಸ್ ಸಹಾಯಕ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಲ್ಟಿಪ್ಲೆಕ್ಸ್ ಮ್ಯಾನೇಜರ್ ನೀಡಿದ ದೂರಿನ ಆಧಾರದ ಮೇಲೆ ಎಂಎನ್ಎಸ್ ಮಾಜಿ ಕಾರ್ಪೋರೇಟರ್ ಕಿಶೋರ್ ಶಿಂಧೆ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಚಾತುಶುರಂಗಿ ಪೊಲೀಸ್ ಠಾಣೆಯ ಪೊಲೀಸರು ಹೇಳಿದ್ದಾರೆ.
ನಿನ್ನೆ ಸುಮಾರು ಒಂದು ಡಜನ್ ಎಂಎನ್ಎಸ್ ಕಾರ್ಯಕರ್ತರು ಸೇನಾಪತಿ ಬಾಪತ್ ರಸ್ತೆಯಲ್ಲಿರುವ ಪಿವಿಆರ್ ಐಕಾನ್ ಗೆ ಆಗಮಿಸಿ, ತಿಂಡಿ ತಿನಿಸುಗಳಿಗೆ ದುಬಾರಿ ಬೆಲೆ ವಿಧಿಸುತ್ತಿರುವುದನ್ನು ವಿರೋಧಿಸಿ ಪ್ರತಿಭಟಿಸಿದರು. ಈ ವೇಳೆ ಕೆಲ ಕಾರ್ಯಕರ್ತರು ಮಲ್ಟಿಪ್ಲೆಕ್ಸ್ ನ ಸಹಾಯಕ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ಸೇರೆಯಾಗಿದೆ.
ರಾಜ್ ಠಾಕ್ರೆ ನೇತೃತ್ವದ ಎಂಎನ್ಎಸ್ ಮಾಜಿ ಕಾರ್ಪೋರೇಟರ್ ಶಿಂಧೆ ಹಾಗೂ ಇತರ ಇಬ್ಬರು ಕಾರ್ಯಕರ್ತರು ಮಲ್ಟಿಪ್ಲೆಕ್ಸ್ ಪ್ರತಿನಿಧಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com