ಮಧ್ಯಪ್ರದೇಶದ ಸಿಎಂ ನ್ನು ಬಿಜೆಪಿ ಬದಲಾವಣೆ ಮಾಡಬೇಕು: ಆರ್ ಎಸ್ಎಸ್ ನಾಯಕ ಸೂರ್ಯಕಾಂತ್ ಕೇಲ್ಕರ್

ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಬೇಕೆಂದು ಆರ್ ಎಸ್ಎಸ್ ನ ಹಿರಿಯ ನಾಯಕ ಸೂರ್ಯಕಾಂತ್ ಕೇಲ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಶಿವರಾಜ್ ಸಿಂಗ್ ಚೌಹಾಣ್
ಶಿವರಾಜ್ ಸಿಂಗ್ ಚೌಹಾಣ್
Updated on
ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಬೇಕೆಂದು ಆರ್ ಎಸ್ಎಸ್ ನ ಹಿರಿಯ ನಾಯಕ ಸೂರ್ಯಕಾಂತ್ ಕೇಲ್ಕರ್ ಅಭಿಪ್ರಾಯಪಟ್ಟಿದ್ದಾರೆ. 
ಕೆಲವು ದಿನಗಳ ಹಿಂದೆ ಪ್ರಕಟಗೊಂಡ ಮಧ್ಯಪ್ರದೇಶದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವ ಆಯ್ಕೆಯನ್ನು ಬಿಜೆಪಿ ಪರಿಗಣಿಸಬೇಕೆಂದು ಸೂರ್ಯಕಾಂತ್ ಕೇಲ್ಕರ್ ಹೇಳಿದ್ದಾರೆ. 
ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಉಂಟಾದಂತೆ ಕಾಣುತ್ತಿದ್ದು, ಸಚಿವ ಸಂಪುಟದಲ್ಲಿ ಹೊಸ ಮುಖಗಳನ್ನು ಬಿಜೆಪಿ ಪರಿಚಯಿಸಬೇಕು, ಒಂದೇ ನಾಯಕತ್ವ ಇದ್ದರೆ ಆಡಳಿತ ವಿರೋಧಿ ಅಲೆ ಉಂಟಾಗುತ್ತದೆ ಎಂದು ಕೇಲ್ಕರ್ ಅಭಿಪ್ರಾಯಪಟ್ಟಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com