ನವದೆಹಲಿ: ಉದ್ಯೋಗ ಮತ್ತು ಆರ್ಥಿಕತೆ ಬಗ್ಗೆ ಚರ್ಚಿಸಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಿಂಗಾಪೂರ್ ಗೆ ತೆರಳಿದ್ದಾರೆ, ಸಿಂಗಾಪೂರ್ ನಲ್ಲಿರುವ ಭಾರತೀಯ ಮೂಲದ ಸಿಇಓಗಳ ಜೊತೆ ಚರ್ಚಿಸಿ ಭಾರತದ ಪ್ರಚಲಿತ ಆರ್ಥಿಕ ಸ್ಥಿತಿಯಲ್ಲಿ ಬಂಡವಾಳ ಹೂಡಿಕೆ ಮತ್ತು ಆರ್ಥಿಕ ಸ್ಥಿತಿಗಳ ಬಗ್ಗೆ ಚರ್ಚಿಸಲಿದ್ದಾರೆ.
ಭಾರತದಲ್ಲಿರುವ ಹಳ್ಳಿಗಳ ಜನ ವಲಸೆ ಹೋಗುತ್ತಿದ್ದಾರೆ, ನಮ್ಮ ಮುಂದೆ ದೊಡ್ಡ ಸವಾಲಿದೆ,ಎಲ್ಲರೂ ಒಗ್ಗಟ್ಟಾಗಿ ಶಾಂತಿಯುತವಾಗಿ ನಡೆದು ಹೋಗಬೇಕು ಎಂದು ನಾವು ಬಯಸುತ್ತೇವೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಲೀ ಕೌನ್ ಯೆ ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿ ಶಾಲೆಯಲ್ಲಿ ಕೂಡ ರಾಹುಲ್ ಗಾಂಧಿ ಭಾಷಣ ಮಾಡಿದರು, ಮಾರ್ಚ್ 8 ರಿಂದ 10 ರವರೆಗೆ ರಾಹುಲ್ ಗಾಂಧಿ ಮೂರು ದಿನಗಳ ಸಿಂಗಾಪೂರ್ ಮತ್ತು ಮಲೇಶಿಯಾ ಪ್ರವಾಸದಲ್ಲಿದ್ದಾರೆ.