ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೀನಾ ಗಡಿ ಕಾಯುವ ವೇಳೆ ಹುತಾತ್ಮರಾದರೆ, ಗಾಯಗೊಂಡರೆ ಸಂಪೂರ್ಣ ವೇತನ ಪಿಂಚಣಿ

ಭಾರತ-ಚೀನಾ ಗಡಿಯನ್ನು ಕಾಪಾಡುವ ಸಂದರ್ಭದಲ್ಲಿ ಸಶಸ್ತ್ರ ಪಡೆಗಳ ಸಿಬ್ಬಂದಿ ಹುತಾತ್ಮರಾದರೆ....
ನವದೆಹಲಿ: ಭಾರತ-ಚೀನಾ ಗಡಿಯನ್ನು ಕಾಪಾಡುವ ಸಂದರ್ಭದಲ್ಲಿ ಸಶಸ್ತ್ರ ಪಡೆಗಳ ಸಿಬ್ಬಂದಿ ಹುತಾತ್ಮರಾದರೆ ಅಥವಾ ಗಾಯಗೊಳ್ಳುವ ಯೋಧರನ್ನು ಕೇಂದ್ರ ಸರ್ಕಾರ 'ವಿಶೇಷ' ಪಿಂಚಣಿ ಯೋಜನೆಯ ವ್ಯಾಪ್ತಿಗೆ ಸೇರಿಸಿದೆ.  ಆದರೆ ಇದನ್ನು ಪೂರ್ವಾನ್ವಯವಾಗುವಂತೆ ಜಾರಿಗೊಳಿಸಬೇಕು ಎಂಬ ಸೇನೆಯ ದೀರ್ಘಾವಧಿಯ ಬೇಡಿಕೆಯನ್ನು ತಳ್ಳಿಹಾಕಲಾಗಿದೆ.
ಈ 'ವಿಶೇಷ ಕುಟುಂಬ ಪಿಂಚಣಿ' ಯೋಜನೆ ಪಾಕಿಸ್ತಾನದೊಂದಿಗಿನ ಅಂತರಾಷ್ಟ್ರೀಯ ಗಡಿಯಲ್ಲಿ ಮತ್ತು ಗಡಿ ನಿಯಂತ್ರಣ ರೇಖೆ(ಎಲ್ ಒಸಿ) ಬಳಿ ನಿಯೋಜಿತ ಭದ್ರತಾ ಸಿಬ್ಬಂದಿಗಳಿಗೆ ಅನ್ವಯಿಸುತ್ತದೆ.
ಈ ಹಿಂದೆ ಶೇ.30ರಷ್ಟು ಸಾಮಾನ್ಯ ಕುಟುಂಬ ಪಿಂಚಣಿ ನೀಡಲಾಗುತ್ತಿದ್ದು, ಈಗ ವಿಶೇಷ ಪಿಂಚಣಿ ಯೋಜನೆಯಲ್ಲಿ ಶೇ.100ರಷ್ಟು ಪಿಂಚಣಿ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿಶೇಷ ಕುಟುಂಬ ಪಿಂಚಣಿ ಯೋಜನೆ ಮಾರ್ಚ್ 7ರಿಂದ ಜಾರಿಗೆ ಬರಲಿದೆ ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com