ಚೀನಾ ಗಡಿ ಕಾಯುವ ವೇಳೆ ಹುತಾತ್ಮರಾದರೆ, ಗಾಯಗೊಂಡರೆ ಸಂಪೂರ್ಣ ವೇತನ ಪಿಂಚಣಿ

ಭಾರತ-ಚೀನಾ ಗಡಿಯನ್ನು ಕಾಪಾಡುವ ಸಂದರ್ಭದಲ್ಲಿ ಸಶಸ್ತ್ರ ಪಡೆಗಳ ಸಿಬ್ಬಂದಿ ಹುತಾತ್ಮರಾದರೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಭಾರತ-ಚೀನಾ ಗಡಿಯನ್ನು ಕಾಪಾಡುವ ಸಂದರ್ಭದಲ್ಲಿ ಸಶಸ್ತ್ರ ಪಡೆಗಳ ಸಿಬ್ಬಂದಿ ಹುತಾತ್ಮರಾದರೆ ಅಥವಾ ಗಾಯಗೊಳ್ಳುವ ಯೋಧರನ್ನು ಕೇಂದ್ರ ಸರ್ಕಾರ 'ವಿಶೇಷ' ಪಿಂಚಣಿ ಯೋಜನೆಯ ವ್ಯಾಪ್ತಿಗೆ ಸೇರಿಸಿದೆ.  ಆದರೆ ಇದನ್ನು ಪೂರ್ವಾನ್ವಯವಾಗುವಂತೆ ಜಾರಿಗೊಳಿಸಬೇಕು ಎಂಬ ಸೇನೆಯ ದೀರ್ಘಾವಧಿಯ ಬೇಡಿಕೆಯನ್ನು ತಳ್ಳಿಹಾಕಲಾಗಿದೆ.
ಈ 'ವಿಶೇಷ ಕುಟುಂಬ ಪಿಂಚಣಿ' ಯೋಜನೆ ಪಾಕಿಸ್ತಾನದೊಂದಿಗಿನ ಅಂತರಾಷ್ಟ್ರೀಯ ಗಡಿಯಲ್ಲಿ ಮತ್ತು ಗಡಿ ನಿಯಂತ್ರಣ ರೇಖೆ(ಎಲ್ ಒಸಿ) ಬಳಿ ನಿಯೋಜಿತ ಭದ್ರತಾ ಸಿಬ್ಬಂದಿಗಳಿಗೆ ಅನ್ವಯಿಸುತ್ತದೆ.
ಈ ಹಿಂದೆ ಶೇ.30ರಷ್ಟು ಸಾಮಾನ್ಯ ಕುಟುಂಬ ಪಿಂಚಣಿ ನೀಡಲಾಗುತ್ತಿದ್ದು, ಈಗ ವಿಶೇಷ ಪಿಂಚಣಿ ಯೋಜನೆಯಲ್ಲಿ ಶೇ.100ರಷ್ಟು ಪಿಂಚಣಿ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿಶೇಷ ಕುಟುಂಬ ಪಿಂಚಣಿ ಯೋಜನೆ ಮಾರ್ಚ್ 7ರಿಂದ ಜಾರಿಗೆ ಬರಲಿದೆ ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com