ಶಿಮ್ಲಾ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ ನಡ್ಡಾ ಗುರುವಾರ ರಾಜ್ಯಸಭೆ ಚುನಾವಣೆಗಾಗಿ ಹಿಮಾಚಲ ಪ್ರದೇಶದಿಂದ ಭಾರತೀಯ ಜನತಾ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ.
ಜೆ.ಪಿ ನಡ್ಡಾ, ತಮ್ಮ ತವರು ರಾಜ್ಯವಾದ ಹಿಮಾಚಲ ಪ್ರದೇಶದಿಂದ ಮೇಲ್ಮನೆಗೆ ಪುನಾರಾಯ್ಕೆ ಬಯಸಿದ್ದಾರೆ.
ರಾಜ್ಯಸಭೆಯಲ್ಲಿ 59 ಸ್ಥಾನಗಳಿದ್ದು, ಬಿಜೆಪಿಯ 17 ಕಾಂಗ್ರೆಸ್ ನ 12 ಸಂಸದರ ಅವಧಿ ಏಪ್ರಿಲ್ ಗೆ ಕೊನೆಯಾಗಲಿದೆ. ನಟಿ ರೇಖಾ, ಕ್ರಿಕೆಟರ್ ಸಚಿನ್ ತೆಂಡೂಲ್ಕರ್, ಸಮಾಜ ಕಾರ್ಯಕರ್ತೆ ಅನು ಆಗಾ ನಿವೃತ್ತರಾಗಲಿದ್ದಾರೆ. 17 ರಾಜ್ಯಸಭೆ ಸದಸ್ಯರಲ್ಲಿ 8 ಮಂದಿ ಕೇಂದ್ರ ಸಚಿವರಿದ್ದಾರೆ.
ಹಣಕಾಸು ಸಚಿವ ಅರುಣ್ ಜೈಟ್ಲಿ ಉತ್ತರ ಪ್ರದೇಶದಿಂದ ಮತ್ತು ರವಿಶಂಕರ್ ಪ್ರಸಾದ್ ಬಿಹಾರದಿಂದ ಸ್ಪರ್ಧಿಸಲಿದ್ದಾರೆ, ಪ್ರಕಾಶ್ ಜಾವ್ಡೇಕರ್ ಮಹಾರಾಷ್ಟ್ರದಿಂದ ಭೂಪಿಂದರ್ ಯಾದವ್ ರಾಜಸ್ತಾನದಿಂದ ನಾಮಪತ್ರ ಸಲ್ಲಿಸಲಿದ್ದಾರೆ.