ಮೈಕ್ ಎಸೆದ ಪ್ರಕರಣ: ಇಬ್ಬರು ಕಾಂಗ್ರೆಸ್ ಶಾಸಕರ ಉಚ್ಚಾಟನೆ

ತೆಲಂಗಾಣ ವಿಧಾನಸಭೆಯ ಕಾಂಗ್ರೆಸ್ ಶಾಸಕ ಕೋಮತಿ ವೆಂಕಟರೆಡ್ಡಿ ಎಸೆದ ಮೈಕ್ ತಾಗಿ, ಸಭಾಧ್ಯಕ್ಷರ ಕಣ್ಣಿಗೆ ಗಾಯವಾಗಿರುವ ಪ್ರಕರಣ ಸಂಬಂಧ, ಇಬ್ಬರು ...
ತೆಲಂಗಾಣ ವಿಧಾನ ಸಭೆ
ತೆಲಂಗಾಣ ವಿಧಾನ ಸಭೆ
Updated on
ತೆಲಂಗಾಣ:  ತೆಲಂಗಾಣ ವಿಧಾನಸಭೆಯ ಕಾಂಗ್ರೆಸ್ ಶಾಸಕ ಕೋಮತಿ ವೆಂಕಟರೆಡ್ಡಿ ಎಸೆದ ಮೈಕ್ ತಾಗಿ, ಸಭಾಧ್ಯಕ್ಷರ ಕಣ್ಣಿಗೆ ಗಾಯವಾಗಿರುವ ಪ್ರಕರಣ ಸಂಬಂಧ, ಇಬ್ಬರು ಕಾಂಗ್ರೆಸ್ ಶಾಸಕರನ್ನು ಅಮಾನತುಗೊಳಿಸಲಾಗಿದೆ.
ಕಾಂಗ್ರೆಸ್ ಶಾಸಕ ಕೋಮತಿ ರೆಡ್ಡಿ ಮತ್ತು ಸಂಪತ್ ಕುಮಾರ್ ಅವರನ್ನು ತೆಲಂಗಾಣ ಶಾಸನಸಭೆಯಿಂದ ಅಮಾನತುಗೊಳಿಸಲಾಗಿದೆ. ಇದರ ಜೊತೆಗೆ
ತೆಲಂಗಾಣ ರಾಜ್ಯ ಬಜೆಟ್ ಅಧಿವೇಶನದ ಹಿನ್ನಲೆಯಲ್ಲಿ ಮೊದಲ ದಿನದ ಜಂಟಿ ಅಧಿವೇಶನವನ್ನು ನಿನ್ನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ರಾಜ್ಯಪಾಲ ಇಎಸ್ಎಲ್ ನರಸಿಂಹನ್ ಅವರ ಭಾಷಣ ಮುಗಿಯುತ್ತಿದ್ದಂತೆಯೇ ವಿರೋಧ ಪಕ್ಷ ಕಾಂಗ್ರೆಸ್ ಸದಸ್ಯರು ಭಾರೀ ಗದ್ದಲವನ್ನುಂಟು ಮಾಡಿದ್ದರು. 
ಈ ವೇಳೆ ಕಾಂಗ್ರೆಸ್ ಶಾಸಕ ಕೋಮತಿರೆಡ್ಡಿ ವೆಂಕಟ ರೆಡ್ಡಿಯವರು ತಾವು ಹಾಕಿಕೊಂಡಿದ್ದ ಹೆಡ್ ಫೋನ್'ನ್ನು ಕಿತ್ತು ಎಸೆದಿದ್ದಾರೆ. ಈ ವೇಳೆ ಅದು ರಾಜ್ಯಪಾಲರ ಪಕ್ಕ ಕುಳಿತಿದ್ದ ವಿಧಾನಪರಿಷತ್ ಸಭಾಧ್ಯಕ್ಷ ಸ್ವಾಮಿ ಗೌಡ್ ಅವರ ಕಣ್ಣಿಗೆ ತಾಗಿ ರಕ್ತಸುರಿಯತೊಡಗಿತು. ಕೂಡಲೇ ಸಭಾಧ್ಯಕ್ಷರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸಲಾಗಿದೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com