ಪ್ರತಿಪಕ್ಷಗಳ ಗದ್ದಲಕ್ಕೆ ಹತ್ತನೇ ದಿನದ ಲೋಕಸಬಾ ಕಲಾಪವೂ ಬಲಿಯಾಗಿದೆ. ಟಿಡಿಪಿ, ವೈಎಸ್ಆರ್ ಕಾಂಗ್ರೆಸ್, ಎಐಎಡಿಎಂಕೆ, ಆರ್ ಜೆಡಿ ಸೇರಿ ವಿವಿಧ ಪ್ರತಿಪಕ್ಷಗಳು ಬ್ಯಾಂಕಿಂಗ್ ಹಗರಣ , ಆಂಧ್ರಕ್ಕೆ ವಿಶೇಷ ಸ್ಥಾನಮಾನ ಸೇರಿ ನಾನಾ ವಿಚಾರಗಳನ್ನೆತ್ತಿ ತಮ್ಮ ಪ್ರತಿಭಟನೆ ನಡೆಸಿದವು. ಸ್ಪೀಕರ್ ಸುಮಿತ್ರಾ ಮಹಾಜನ್ ಪ್ರಶ್ನೋತ್ತರ ಕಲಾಪ ಪ್ರಾರಂಭಿಸುವ ವೇಳೆ ಈ ಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಗದ್ದಲ ನಡೆಸಿದ್ದರು.