ಈಶಾನ್ಯ ಜನರಿಗೆ ಹೆಚ್ಚು ಸ್ವಾಯತ್ತತೆ ನೀಡಿ: ಶಶಿ ತರೂರ್

ವಿಭಿನ್ನ ಪ್ರದೇಶಗಳಲ್ಲಿ ವಿಭಿನ್ನ ಸಮಸ್ಯೆಗಳು ಇರುತ್ತವೆ. ಒಂದೇ ರೀತಿಯ ವಿಧಾನವನ್ನು ಎಲ್ಲಾ ಕಡೆ ಅಳವಡಿಸಲು ಸಾಧ್ಯವಿಲ್ಲ. ಹೀಗಾಗಿ ಈಶಾನ್ಯ ಜನರಿಗೆ ಹೆಚ್ಚಿನ...
ಶಶಿ ತರೂರ್
ಶಶಿ ತರೂರ್
Updated on
ನವದೆಹಲಿ: ವಿಭಿನ್ನ ಪ್ರದೇಶಗಳಲ್ಲಿ ವಿಭಿನ್ನ ಸಮಸ್ಯೆಗಳು ಇರುತ್ತವೆ. ಒಂದೇ ರೀತಿಯ ವಿಧಾನವನ್ನು ಎಲ್ಲಾ ಕಡೆ ಅಳವಡಿಸಲು ಸಾಧ್ಯವಿಲ್ಲ. ಹೀಗಾಗಿ ಈಶಾನ್ಯ ಜನರಿಗೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡಬೇಕು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ. 
ದೆಹಲಿಯಲ್ಲಿ ಬುಕ್ ಶಾಪೊಂದನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಸ್ಥಳೀಯ ಜನರಿಗೆ(ಈಶಾನ್ಯರಿಗೆ) ಸಾಧ್ಯವಾದಷ್ಟು ಸ್ವಾಯತ್ತತೆಗೆ ನೀಡಬೇಕೆಂಬುದು ನನ್ನ ಅಭಿಪ್ರಾಯ. ದೇಶದ ಪ್ರತಿಯೊಂದು ಪ್ರದೇಶದ ಅಗತ್ಯತೆಗಳು ಮತ್ತು ಸೂಕ್ಷ್ಮತೆಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ ಎಂದರು. 
ಒಂದು ಛತ್ರಿ ನೋಟಕ್ಕಿಂತ ಹೆಚ್ಚಾಗಿ, ಈ ಪ್ರದೇಶದ ಅರ್ಧದಷ್ಟು ಡಜನ್ ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರುವುದು ಒಳ್ಳೆಯದು, ಏಕೆಂದರೆ ರಾಜ್ಯಗಳಲ್ಲಿಯ ಸಮಸ್ಯೆಗಳು ಒಂದೇ ಆಗಿರುವುದಿಲ್ಲ ಎಂದು ಶಶಿ ತರೂರ್ ಹೇಳಿದ್ದಾರೆ. 
ಹೆಚ್ಚಾಗಿ ನಾವು ವಿಕೇಂದ್ರೀಕೃತ ಪ್ರಜಾಪ್ರಭುತ್ವವನ್ನು ಹೊಂದಿರಬೇಕು. ಉತ್ತರ, ಈಶಾನ್ಯ ಅಥವಾ ದಕ್ಷಿಣಕ್ಕೆ ಹೆಚ್ಚು ದೂರದ ಪ್ರದೇಶಗಳ ಸಮಸ್ಯೆಗಳನ್ನು ಬಗೆಹರಿಸಲು ದೆಹಲಿಯಲ್ಲಿ ಕುಳಿತು ಪ್ರತಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ನಾನು ಭಾವಿಸುತ್ತೇನೆ ಎಂದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com