ಮೈತ್ರಿಪಾಲ ಸಿರಿಸೇನಾ ಅವರ ಕಾರ್ಯದರ್ಶಿ ಆಸ್ಟಿನ್ ಫರ್ನಾಂಡೋ ಈ ಬಗ್ಗೆ ಮಾಹಿತಿ ನೀಡಿದ್ದು, ತುರ್ತುಪರಿಸ್ಥಿತಿ ಹಿಂಪಡೆಯುತ್ತಿರುವ ಆದೇಶಕ್ಕೆ ಅಧ್ಯಕ್ಷರು ಸಹಿ ಹಾಕಿದ್ದಾರೆ ಎಂದು ತಿಳಿಸಿದ್ದಾರೆ. ಶ್ರೀಲಂಕಾದ ಕ್ಯಾಂಡಿ ಜಿಲ್ಲೆಯಲ್ಲಿ ಕೋಮುಗಲಭೆ ಸಂಭವಿಸಿದ ಹಿನ್ನೆಲೆಯಲ್ಲಿ ಲಂಕಾ ಅಧ್ಯಕ್ಷರು ತುರ್ತು ಪರಿಸ್ಥಿತಿ ಹೇರಿದ್ದರು.