ರಥ ಯಾತ್ರೆಗೆ ಅವಕಾಶ ನೀಡಿದ್ದಕ್ಕಾಗಿ ವಿಪಕ್ಷ ಡಿಎಂಕೆ ಆಡಳಿತೂರೂಢ ಎಐಡಿಎಂಕೆ ವಿರುದ್ಧ ಕಿಡಿ ಕಾರಿದೆ. ವಿಪಕ್ಷ ನಾಯಕ ಸ್ಟಾಲಿನ್ 'ಯಾತ್ರೆಯಿಂದ ರಾಜ್ಯದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗಲಿದೆ, ಕಾನೂನು ಮತ್ತು ಸುವ್ಯವಸ್ಥೆ ಹಾಳಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಎಐಎಡಿಎಂಕೆ ಸರ್ಕಾರ ಇದೆಯೋ ಬಿಜೆಪಿ ಸರ್ಕಾರ ಇದೆಯೊ ತಿಳಿಯುತ್ತಿಲ್ಲ'ಎಂದು ಆಕ್ರೋಶ ಹೊರ ಹಾಕಿದ್ದಾರೆ.