2ಜಿ ಹಗರಣದ ವೇಳೆ ಮಾಡಲಾದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ರಾಜಾ, ಕನಿಮೋಳಿ ಮತ್ತು ಇತರರಿಗೆ ನೋಟೀಸ್ ನಿಡಿದೆ. ನ್ಯಾಯಾಧೀಶರಾದ ಎಸ್.ಪಿ ಗರ್ಗ್ ವಿಶೇಷ ನ್ಯಾಯಾಲಯ 2ಜಿ ಹಗರಣದಲ್ಲಿ ರಾಜಾ, ಕನಿಮೋಳಿ ಹಾಗೂ ಇತರರನ್ನು ನಿರ್ದೋಷಿಗಳೆಂದು ತೀರ್ಪು ನಿಡಿದ್ದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮನವಿಯನ್ನು ಆಲಿಸಿ ಇದಕ್ಕಾಗಿ ಪ್ರತ್ಯೇಕ ನೋಟೀಸ್ ಜಾರಿಗೊಳಿಸಿದ್ದಾರೆ.