ಈ ತಿಂಗಳ ಆರಂಭದಲ್ಲಿ ಪಡಿತರವನ್ನು ಸೀಲ್ ಮಾಡಿದ ಪಾಕೇಟ್ ಗಳಲ್ಲಿ ಮನೆ ಬಾಗಿಲಿಗೇ ವಿತರಿಸಲು ದೆಹಲಿ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ದೆಹಲಿ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರು, ದೆಹಲಿಯ ಬಡ ಜನತೆಯ ಪರದಾಟವನ್ನು ಗಮನದಲ್ಲಿಟ್ಟುಕೊಂಡು ಈ ಪ್ರಸ್ತಾವನೆಯನ್ನು ಪರಿಗಣಿಸುವಂತೆ ಲೆಫ್ಟಿನೆಂಟ್ ಗವರ್ನರ್ ಗೆ ಮನವಿ ಮಾಡಿದ್ದಾರೆ.