ನಾಳೆ ಉತ್ತರ ಪ್ರದೇಶ ವಿಧಾನಸಭೆಯಿಂದ ರಾಜ್ಯಸಭೆಗೆ ಚುನಾವಣೆ ನಡೆಯುತ್ತಿದ್ದು, ಬಿಎಸ್ಪಿಯಿಂದ ಭೀಮ ರಾವ್ ಅಂಬೇಡ್ಕರ್ ಹಾಗೂ ಎಸ್ಪಿಯಿಂದ ಜಯಾ ಬಚ್ಚನ್ ಅವರು ಸ್ಪರ್ಧಿಸಿದ್ದಾರೆ. ವಿಧಾನಸಭೆಯಲ್ಲಿ ಎಸ್ಪಿ 46 ಹಾಗೂ ಬಿಎಸ್ಪಿ 19 ಶಾಸಕರನ್ನು ಹೊಂದಿದೆ. 7 ಕಾಂಗ್ರೆಸ್ ಹಾಗೂ ಒಂದು ಆರ್ ಎಲ್ ಡಿ ಸೇರಿ ಪ್ರತಿಪಕ್ಷಗಳ ಬಲ ಒಟ್ಟು 73 ಇದೆ. ಆದರೆ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಲು ತಲಾ 37 ಮತಗಳ ಅಗತ್ಯವಿದೆ.