ಕಾಂಗ್ರೆಸ್ ಮುಕ್ತ ಭಾರತ ರಾಜಕೀಯ ಘೋಷಣೆಯಷ್ಟೇ, ಆರ್ ಎಸ್ಎಸ್ ಯಾರನ್ನೂ ಬಹಿಷ್ಕರಿಸುವುದಿಲ್ಲ: ಭಾಗ್ವತ್

ಕಾಂಗ್ರೆಸ್ ಮುಕ್ತ ಭಾರತ ರಾಜಕೀಯ ಘೋಷಣೆಯಷ್ಟೇ, ಸಂಘಪರಿವಾರ ಯಾರನ್ನೂ ಬಹಿಷ್ಕರಿಸುವುದಿಲ್ಲ ಎಂದು ಆರ್ ಎಸ್ ಎಸ್ ನ ಮುಖಂಡ ಮೋಹನ್ ಭಾಗ್ವತ್ ಹೇಳಿದ್ದಾರೆ.
ಮೋಹನ್ ಭಾಗ್ವತ್
ಮೋಹನ್ ಭಾಗ್ವತ್
ಪುಣೆ: ಕಾಂಗ್ರೆಸ್ ಮುಕ್ತ ಭಾರತ ರಾಜಕೀಯ ಘೋಷಣೆಯಷ್ಟೇ, ಸಂಘಪರಿವಾರ ಯಾರನ್ನೂ ಬಹಿಷ್ಕರಿಸುವುದಿಲ್ಲ ಎಂದು ಆರ್ ಎಸ್ ಎಸ್ ನ ಮುಖಂಡ ಮೋಹನ್ ಭಾಗ್ವತ್ ಹೇಳಿದ್ದಾರೆ. 
ಮುಕ್ತ ಮಾಡುವುದು ರಾಜಕೀಯ ಭಾಷೆ, ನಾವು ಯಾರನ್ನೂ ಬಹಿಷ್ಕರಿಸುವುದಿಲ್ಲ ಎಂದು ಭಾಗ್ವತ್ ಹೇಳಿದ್ದಾರೆ. ಪುಣೆಯಲ್ಲಿ ಐಎಫ್ಎಸ್ ಅಧಿಕಾರಿಯೊಬ್ಬರು ಬರೆದಿರುವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿರುವ  ಮೋಹನ್ ಭಾಗ್ವತ್, ನಮ್ಮನ್ನು ವಿರೋಧಿಸುವವರನ್ನೂ ಸೇರಿದಂತೆ ರಾಷ್ಟ್ರ ನಿರ್ಮಾಣದ ಕೆಲಸಕ್ಕಾಗಿ ಒಗ್ಗಟ್ಟಿನಿಂದ ಮುಂದಡಿ ಇಡಬೇಕಾಗುತ್ತದೆ. ನಾವು ಯಾರನ್ನೂ ಬಹಿಷ್ಕರಿಸುವುದಿಲ್ಲ ಕಾಂಗ್ರೆಸ್ ಮುಕ್ತ ಭಾರತ ರಾಜಕೀಯ ಘೋಷಣೆಯಷ್ಟೇ ಎಂದು ಭಾಗ್ವತ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com