ತಮ್ಮ ಸರ್ಕಾರವನ್ನು ಗೇಲಿಮಾಡುವವರ, ತಿವಿಯುವವರ ಉಗುರನ್ನು ಕತ್ತರಿಸುತ್ತಾರಂತೆ ತ್ರಿಪುರಾ ಸಿಎಂ!

ಅಧಿಕಾರಕ್ಕೆ ಬಂದು ಕೆಲವೇ ತಿಂಗಳು ಕಳೆಯುತ್ತಿದ್ದಂತೆಯೇ ಸಾಲು ಸಾಲು ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ತ್ರಿಪುರಾ ಸಿಎಂ ಬಿಪ್ಲಬ್ ದೇಬ್ ಈಗ ಮತ್ತೊಂದು ವಿವಾದಕ್ಕೆ ಕಾರಣವಾಗುವಂತಹ ಹೇಳಿಕೆ ನೀಡಿದ್ದಾರೆ.
ತ್ರಿಪುರಾ ಸಿಎಂ
ತ್ರಿಪುರಾ ಸಿಎಂ
Updated on
ನವದೆಹಲಿ: ಅಧಿಕಾರಕ್ಕೆ ಬಂದು ಕೆಲವೇ ತಿಂಗಳು ಕಳೆಯುತ್ತಿದ್ದಂತೆಯೇ ಸಾಲು ಸಾಲು ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ತ್ರಿಪುರಾ ಸಿಎಂ ಬಿಪ್ಲಬ್ ದೇಬ್ ಈಗ ಮತ್ತೊಂದು ವಿವಾದಕ್ಕೆ ಕಾರಣವಾಗುವಂತಹ ಹೇಳಿಕೆ ನೀಡಿದ್ದಾರೆ. 
ಆಂಗ್ಲ ಸುದ್ದಿ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಬಿಪ್ಲಬ್ ದೆಬ್ ತಮ್ಮ ಸರ್ಕಾರದ ಬಗ್ಗೆ ಗೇಲಿ ಮಾಡಿ, ಸರ್ಕಾರವನ್ನು ತಿವಿಯುವವರ ಉಗುರನ್ನು ಕತ್ತರಿಸುವುದಾಗಿ ಹೇಳಿದ್ದಾರೆ.  ಇದಕ್ಕೆ ತರಕಾರಿ ಮಾರುವವರ ಉದಾಹರಣೆಯನ್ನೂ ನೀಡಿರುವ ಅವರು, ಬೆಳಿಗ್ಗೆ 8 ಗಂಟೆಗೆ ತರಕಾರಿ ಮಾರುವವರು ತರಕಾರಿ ತರುತ್ತಾರೆ, ಆದರೆ ಗ್ರಾಹಕರು ಅದನ್ನು ಪರೀಕ್ಷಿಸಲು ಚಿವುಟುವುದರಿಂದ ಕೇವಲ ಒಂದೇ ಗಂಟೆಯಲ್ಲಿ ಹಾಳಾಗುತ್ತದೆ, ಇದೇ ಪರಿಸ್ಥಿತಿ ನನ್ನ ಸರ್ಕಾರಕ್ಕೆ ಆಗಬಾರದು, ನನ್ನ ಸರ್ಕಾರದಲ್ಲಿ ಯಾವುದೇ ಹಸ್ತಕ್ಷೇಪ ಇರಬಾರದು, ಯಾರಾದರೂ ಮಧ್ಯಪ್ರವೇಶಿಸುವುದಕ್ಕೆ ಯತ್ನಿಸಿದರೆ ಅವರ ಉಗುರನ್ನು ಕತ್ತರಿಸುತ್ತೇನೆ, ನನ್ನ ಸರ್ಕಾರವನ್ನು ಯಾರೂ ಮುಟ್ಟುವಂತಿಲ್ಲ ಎಂದು ದೇಬ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com